News Karnataka Kannada
Thursday, May 02 2024
ಮೈಸೂರು

ಸುತ್ತೂರು ಮಠದ ಎರಡು ಆನೆಗಳೂ ಸರ್ಕಾರಕ್ಕೆ ಹಸ್ತಾಂತರ

Photo Credit :

ಸುತ್ತೂರು ಮಠದ ಎರಡು ಆನೆಗಳೂ ಸರ್ಕಾರಕ್ಕೆ ಹಸ್ತಾಂತರ

ಮೈಸೂರು: ಮೈಸೂರಿನ ಸುತ್ತೂರು ಮಠದ ಎರಡು ಸಾಕಾನೆಗಳನ್ನ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳು ಇಂದು ಸರ್ಕಾರದ ಸುಪತ್ತಿಗೆ ವಾಪಸ್ ನೀಡಿದರು.

ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿದ್ದ ಮಾಸ್ತಿ ಹಾಗೂ ಲಕ್ಷ್ಮಿ ಎರಡು ಆನೆಗಳನ್ನು ಸರ್ಕಾರಕ್ಕೆ ಹಿಂದುರಿಗಿಸಿ ದ್ರೋಣ ಹಾಗೂ ಚಂಪಾ ಮರಿ ಆನೆಗಳನ್ನು ಸರ್ಕಾರದಿಂದ ಪಡೆಯಲಾಗಿತ್ತು. ಆದರೆ ಪಿಸಿಸಿಎಫ್ ಆದೇಶದ ಮೇರೆಗೆ ಮಠದ ಆನೆಗಳನ್ನು ವಾಪಸ್ಸು ನೀಡುವಂತೆ ಶ್ರೀ ಮಠವನ್ನು  ಕೇಳಿಕೊಂಡಿತ್ತು. ಈ ಹಿನ್ನಲೆಯಲ್ಲಿ ಇಂದು ಶ್ರೀಗಳು ಎರಡು ಮರಿ ಮಠದ ಆನೆಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಆನೆಗಳಿಗೆ ಶ್ರೀಗಳು ಹಣ್ಣು ಹಂಪಲು ನೀಡಿ ಹೂವಿನ ಹಾರ ಹಾಕಿ ಬೀಳ್ಕೊಡುಗೆ ಕೊಟ್ಟರು.

ಕೂರ್ಗಳ್ಳಿಗೆ ಸ್ಥಳಾಂತರ:

ಮೃಗಾಲಯದ ಪ್ರಾಣಿಗಳ ಪುನರ್ವಸತಿ ಕೇಂದ್ರ ಕೂರ್ಗಳ್ಳಿಗೆ ಎರಡು ಆನೆಗಳನ್ನ ಸ್ಥಳಾಂತರಿಸಲಾಗಿದ್ದು ಎರಡು ಮರಿ ಆನೆಗಳು ಆರೋಗ್ಯ ಚೆನ್ನಾಗಿದ್ದು, ಪಿಸಿಸಿಎಫ್ ಆದೇಶದ ಮೇರೆಗೆ ಈ ಆನೆಗಳನ್ನು ಇಲ್ಲಿ ಇಡಲಾಗಿದ್ದು ಈಗಾಗಲೇ ಮೃಗಾಲಯದಲ್ಲಿ 8 ಆನೆಗಳಿದ್ದು ಮೃಗಾಲಯ ಪ್ರಾಧಿಕಾರದ ನಿಯಮದ ಪ್ರಕಾರ 5 ಆನೆಗಳನ್ನು ಮಾತ್ರ ಮೃಗಾಲಯದಲ್ಲಿ ಇಟ್ಟುಕೊಳ್ಳಲು ಅವಕಾಶವಿದೆ. ಇದರಿಂದ ಮೃಗಾಲಯದಲ್ಲಿರುವ ಮೂರು ಹೆಚ್ಚುವರಿ ಆನೆಗಳನ್ನು ಸಹ ಕೂರ್ಗಳಿಗೆ ಸ್ಥಳಾಂತರಿಸುವ ಬಗ್ಗೆ ಚಿಂತನೆ ನಡೆದಿದೆ ಎಂದು ಮೃಗಲಯ ಕಾರ್ಯ ನಿರ್ವಹಕ ನಿರ್ಧೇಶಕ ಕಮಲಾ ಕರಿಕಳಾನ್ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು