ಮೈಸೂರು: ಹಿರಿಯ ಕಲಾವಿದರ ಒಕ್ಕೂಟ ಹಾಗೂ ನಾದ ವೈಭವ ಟ್ರಸ್ಟ್ ವತಿಯಿಂದ ರಾಮಾನುಜ ರಸ್ತೆಯಲ್ಲಿರುವ ಪ್ರಸಾದ್ ಸ್ಕೂಲ್ ಆಫ್ ರಿದಂಸಾ ಕಚೇರಿಯಲ್ಲಿ ನಿಧನರಾದ ಹಿರಿಯ ಸಂಗೀತ ನಿರ್ದೇಶಕ ರಾಜನ್ ಅವರಿಗೆ ಅವರ ಭಾವಚಿತ್ರ ಹಿಡಿದು ಸಂತಾಪ ಸಲ್ಲಿಸಲಾಯಿತು.
ಈ ಸಂದರ್ಭ ನಾದ ವೈಭವ ಟ್ರಸ್ಟ್ ಅಧ್ಯಕ್ಷರಾದ ಮುಳ್ಳೂರು ಗುರುಪ್ರಸಾದ್ ಮಾತನಾಡಿ ಸಂಗೀತ ಮಾಂತ್ರಿಕ ಎಂದೇ ಪ್ರಖ್ಯಾತರಾದ ರಾಜನ್ ಅವರು ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರೊಂದಿಗೆ ಸಂಗೀತ ಕ್ಷೇತ್ರದಲ್ಲಿ ಉತ್ತಮ ಒಡನಾಟ ಹೆಸರೇ ಹೊಂದಿದ್ದರು, ನಮ್ಮ ಕನ್ನಡ ಚಿತ್ರರಂಗವನ್ನು ಶ್ರೀಮಂತಗೊಳಿಸಿದ ಇಬ್ಬರನ್ನು ಕೆಲವೇ ದಿನಗಳಲ್ಲಿ ಕಳೆದುಕೊಂಡಿರುವುದು ತುಂಬಲಾರದ ನಷ್ಟವಾಗಿದೆ. 375ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ, ಯಾವುದೇ ಶುಭಸಮಾರಂಭ ನಡೆದರೆ ಅಲ್ಲಿ ರಾಜನ್-ನಾಗೇಂದ್ರ ಅವರ ಹಾಡಿದ್ದರೇ ಕಳೇ ಕಟ್ಟುತ್ತಿದ್ದವು, ಸಹಸ್ರಾರು ವೇದಿಕೆ ಕಂಡರೂ ಸಂಗೀತ ಕಲಿತ ಹಾರ್ಮೋನಿಯಂ ಪಕ್ಕದಲ್ಲೆ ಇರುತ್ತಿತ್ತು ಅಂದರೆ ಪಕ್ಕವಾದ್ಯಗಳ ಮೇಲೆ ಅವರಿಗಿರುವ ಗೌರವ ಇಂದಿನ ಯುವಪೀಳಿಗೆಗೆ ಮಾದರಿ ಎಂದರು.
ಇದೇ ಸಂದರ್ಭದಲ್ಲಿ ನಾದ ವೈಭವ ಟ್ರಸ್ಟ್ ಅಧ್ಯಕ್ಷರಾದ ಮುಳ್ಳೂರು ಗುರುಪ್ರಸಾದ್, ಹಿರಿಯ ಕಲಾವಿದರಾದ ಎಚ್.ಪಿ.ನಾಗೇಂದ್ರ ಪ್ರಸಾದ್, ಹಿರಿಯ ಕಲಾವಿದರ ಒಕ್ಕೂಟ ಅಧ್ಯಕ್ಷರು ರಾಘವೇಂದ್ರ ಪ್ರಸಾದ್, ಸುಚೀಂದ್ರ, ಸಾಮಾಜಿಕ ಹೋರಾಟಗಾರ ಯೋಗೇಶ್ ನಾಯ್ಡು, ನವೀನ್ ಕೆಂಪಿ, ಮೋಹನ್ ಕುಮಾರ್ ಗೌಡ, ರಾಕೇಶ್ ಕುಂಚಿಟಿಗ ಹಾಗೂ ಸಂಗೀತ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು