ಮೈಸೂರು: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಅವರು ಶೂ ಧರಿಸಿಯೇ ಚಾಮುಂಡೇಶ್ವರಿ ದೇವಸ್ಥಾನ ಪ್ರವೇಶಿಸಿದ ಘಟನೆ ನಡೆಯಿತು.
ಸಿಎಂ ಆಗಮನದ ಹಿನ್ನೆಲೆಯಲ್ಲಿ ದೇವಸ್ಥಾನ ಬಳಿ ಬಂದೋ ಬಸ್ತ್ ನೋಡುತ್ತಿದ್ದ ಅವರು ಅವಸರದಲ್ಲಿ ದೇವಸ್ಥಾನ ವನ್ನು ಶೂ ಧರಿಸಿಯೇ ಪ್ರವೇಶಿಸಿ ಒಳಕ್ಕೆ ಹೋಗುತ್ತಿದ್ದರು.
ಇದನ್ನು ಗಮನಿಸಿದ ಸಿಬ್ಬಂದಿ ಅವರ ಬಳಿ ಓಡಿ ಬಂದು ಶೂ ಆಧರಿಸಿರುವುದನ್ನು ಅವರ ಗಮನಕ್ಕೆ ತಂದರು. ತಕ್ಷಣವೇ ಹೊರಕ್ಕೆ ಬಂದ ಎಸ್ಪಿ ಚೇತನ್, ಶೂ ಬಿಚ್ಚಿ ಹೊರಗೆ ಇಟ್ಟು, ಮತ್ತೆ ದೇವಸ್ಥಾನ ದ ಒಳಗೆ ಹೋದರು.