ಮೈಸೂರು: ಇನ್ಸ್ಪೆಕ್ಟರ್ ಒಬ್ಬ ಫೇಸ್ ಬುಕ್ನಲ್ಲಿ ಯುವತಿಯನ್ನು ಪರಿಚಯ ಮಾಡಿಕೊಂಡು, ವಿವಾಹವಾಗುವುದಾಗಿ ನಂಬಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿ ವಂಚಿಸಿರುವ ಬಗ್ಗೆ ಆತನ ವಿರುದ್ಧ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಜಯಪುರ ಜಿಲ್ಲೆಯ ಕೆಎಸ್ಆರ್ಪಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಾಯಣ್ಣ ಧನಸಾಗರ್ ಎಂಬಾತನೇ ನಗರದ ಯುವತಿಯನ್ನು ನಂಬಿಸಿ ವಂಚಿಸಿದ್ದಾನೆ ಎನ್ನಲಾಗಿದೆ. ಈ ಹಿಂದೆ ಎಸ್ಐ ಆಗಿದ್ದ ತಾಯಣ್ಣ ಫೇಸ್ಬುಕ್ ಮೂಲಕ ಮೈಸೂರಿನ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದ. ನಂತರ ಆತ ಆಕೆಯನ್ನು ಪ್ರೀತಿಸುವಂತೆ ನಟಿಸಿದ್ದಲ್ಲದೆ, ವಿವಾಹವಾಗುವುದಾಗಿ ನಂಬಿಸಿದ್ದಾನೆ. ನನಗೆ ಮದುವೆಯೇ ಆಗಿಲ್ಲ ಎಂದು ಸುಳ್ಳನ್ನೂ ಹೆಳಿದ್ದಾನೆ.
ದಸರಾ ಹಬ್ಬ ಬಳಕೆ: ಪರಿಚಯವಾಗಿದ್ದ ಯುವತಿಯನ್ನು ಭೇಟಿ ಮಾಡಲು ಆತ ಬಳಸಿಕೊಂಡದ್ದು ನಾಡಹಬ್ಬ ದಸರಾವನ್ನು. ದಸರಾ ಹಬ್ಬ ನಡೆಯುವ ವೇಳೆ ಅನೇಕ ಜಿಲ್ಲೆಗಳಿಂದ ಭದ್ರತೆಗಾಗಿ ಪೊಲೀಸರನ್ನು ನಿೋಂಜಿಸಲಾಗುತ್ತದೆ. ಹೀಗಾಗಿ ಆತನೂ 2019 ರ ದಸರಾದಲ್ಲಿ ಭದ್ರತೆಗೆಂದು ಮೈಸೂರಿಗೆ ಆಗಮಿಸಿದ್ದನು. ಈ ವೇಳೆ ಆತ ಯುವತಿಯನ್ನು ಭೇಟಿಯಾಗಿದ್ದಾನೆ. ನಂತರ ಆಕೆೊಂಡನೆ ಮತ್ತಷ್ಟು ಸಲುಗೆ ಬೆಳೆಸಿಕೊಂಡಿದ್ದಾನೆ. ಇದಾದ ನಂತರ ಆತ ಯುವತಿಯನ್ನು ವಿಜಯಪುರಕ್ಕೆ ಕರೆಸಿಕೊಂಡು ತನ್ನ ವಸತಿಗೃಹದಲ್ಲಿ ಅತ್ಯಾಚಾರವೆಸಗಿದ್ದಾನೆ. ನಂತರ ರಾಜ್ಯದ ವಿವಿಧ ಸ್ಥಳಗಳಲ್ಲದೆ ಗೋವಾ ರಾಜ್ಯಕ್ಕೂ ಆಕೆಯನ್ನು ಕರೆದೊಯ್ದು ಆಕೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ನಂತರ ಆಕೆಯು ತನ್ನನ್ನು ವಿವಾಹವಾಗುವಂತೆ ಒತ್ತಾಯ ಮಾಡಿದಾಗ ಆತ ನಿರಾಕರಿಸಿದ್ದಾನೆ ಎನ್ನಲಾಗಿದೆ. ಹೀಗಾಗಿ ಯುವತಿಯು ಅನ್ಯ ಮಾರ್ಗವಿಲ್ಲದೆ ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ತಾಯಣ್ಣ ಧನಸಾಗರ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಯುವತಿ ಮೇಲೆ ಇನ್ಸ್ಪೆಕ್ಟರ್ ಅತ್ಯಾಚಾರ ; ಮೊಕದ್ದಮೆ ದಾಖಲು
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.