ಮೈಸೂರು: ಅಮಾಯಕ ರೈತರ ಮೇಲೆ ಪೊಲೀಸರ ಅನಾಗರೀಕರ ವರ್ತನೆ ನಿಲ್ಲಬೇಕು ಅವರನ್ನು ತಕ್ಷಣ ಬಿಡುಗಡೆ ಮಾಡಬೇಕು. ಇದಕ್ಕೆ 48 ಗಂಟೆ ಗಡುವು ನೀಡುತ್ತೇನೆ ಇಲ್ಲದಿದ್ದರೆ ನಾನೇ ಬೀದಿಗಿಳಿದು ಹೋರಾಟ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಮಹಾದಾಯಿ ಮದ್ಯಂತರ ತೀರ್ಪಿನಿಂದ ರಾಜ್ಯಕ್ಕೆ ಆಗಿರುವ ಅನ್ಯಾಯಾದ ವಿರುದ್ದ ಬೀದಿಗಿಳಿದಿರುವ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಸರ್ಕಾರಿ ಮತ್ತು ಸಾರ್ವಜನಿಕರ ಆಸ್ತಿ ಪಾಸ್ತಿಗೆ ಉಂಟಾಗಿರುವ ಹಾನಿ ಹಿನ್ನಲ್ಲೆಯಲ್ಲಿ ಮುಗ್ದ ರೈತರು ಮತ್ತು ಅಮಾಯಾಕರ ಮೇಲೆ ಪೊಲೀಸರು ಅನಾಗರಿಕವಾಗಿ ವರ್ತಿಸುತ್ತಿದ್ದು, ಇದರಿಂದ ತಮ್ಮ ಹಕ್ಕಿಗಾಗಿ ಹೋರಾಟ ಮಾಡಿದವರನ್ನು ಪೊಲೀಸರು ವಿನಾಕಾರಣ ಕಿರುಕುಳ ನೀಡಿ ಕೇಸ್ ದಾಖಲಿಸಿ ಬಂದಿಸುತ್ತಿದ್ದು, ಇವರ ದಾಖಲಾಗಿರುವ ಕೇಸ್ ಅನ್ನು ವಾಪಾಸ್ ಪಡೆದು ಅಮಾಯಾಕರನ್ನ ಬಿಡುಗಡೆ ಮಾಡಬೇಕು. ಈ ವಿಷಯವಾಗಿ ಗೃಹ ಸಚಿವರೊಂದಿಗೆ ಇವರ ಬಿಡುಗಡೆಗಾಗಿ ಕೇಸ್ ದಾಖಲಿಸದಂತೆ ಮಾತನಾಡುತ್ತೇನೆ. ಇದಕ್ಕಾಗಿ 48 ಗಂಟೆಗಳ ಕಾಲ ಗಡುವು ನೀಡುತ್ತೇನೆ. ಇಲ್ಲದಿದ್ದರೆ ಎರಡು ಮೂರು ದಿನಗಳಲ್ಲಿ ಉತ್ತರ ಕರ್ನಾಟಕಕ್ಕೆ ತೆರಳಿ ನಾನೇ ಬೀದಿಗಿಳಿದು ಹೋರಾಟ ನಡೆಸುತ್ತೇನೆ ಎಂದರು.
ಸಂಸದರು ಮತ್ತು ಸಚಿವರು ರಾಜೀನಾಮೆ ನೀಡಲಿ:
ಕಳೆದ ಇಪ್ಪತ್ತು ವರ್ಷಗಳಿಂದ ಬಿಜೆಪಿ ಪಕ್ಷಕ್ಕೆ ಮತ ನೀಡಿ ಅಭ್ಯರ್ಥಿಗಳನ್ನು ಗೆಲ್ಲಿಸುತ್ತ ಬಂದಿರುವ ಉತ್ತರ ಕರ್ನಾಟಕದ ಜನತೆಯ ಋಣವನ್ನು ಪ್ರಧಾನಿ ಮೋದಿ ತೀರಿಸಲಿ. ಇಲ್ಲದಿದ್ದರೆ 17 ಜನ ಸಂಸದರು, ಮಂತ್ರಿಗಳು ಸೇರಿದಂತೆ ರಾಜೀನಾಮೆಯನ್ನು ಬಿಸಾಕಿ ಬರಲಿ ಎಂದು ಹೇಳಿಕೆ ನೀಡಿದ ಹೆಚ್.ಡಿ.ಕೆ ಬಿಜೆಪಿ ಸಂಸದರು ಗಟ್ಟಿತನ ಪ್ರದರ್ಶಿಸಲಿ. ಇಲ್ಲದಿದರೆ ಕರ್ನಾಟಕಕ್ಕೆ ಹೋಗುವ ಪರಿಸ್ಥಿತಿಯಲ್ಲಿ ನಾವಿಲ್ಲ ಎಂದು ಪ್ರಧಾನಿಯವರಿಗೆ ಮನವರಿಕೆ ಮಾಡಿಕೊಡಲಿ. ಪ್ರಧಾನ ಮಂತ್ರಿ ಮನಸ್ಸು ಮಾಡಿದರೆ ಎರಡು ನಿಮಿಷದಲ್ಲಿ ಸಮಸ್ಯೆ ಬಗೆ ಹರಿಸಬಹುದು. ಆ ಯ್ಯೋಗತೆ ಇಲ್ಲದಿದ್ದರೆ ಸಂಸದರು ರಾಜೀನಾಮೆ ಬಿಸಾಕಿ ಬನ್ನಿ ಎಂದು ಸಲಹೆ ನೀಡಿದರು.
ನ್ಯಾಯಾಧೀಕರಣ ಮದ್ಯಂತರ ತೀರ್ಪು ಅಂತಿಮ ವರದಿಯ ತೀರ್ಪು ಇದೇ ರೀತಿ ಇರುತ್ತದೆ. ಮಹಾದಾಯಿ ವಿಚಾರವನ್ನು ಎರಡು ರಾಜಕೀಯ ಪಕ್ಷಗಳು 2018ರ ಚುನಾವಣೆವರೆಗೆ ಜೀವಂತವಾಗಿಡಲು ಯತ್ನಿಸುತ್ತಿದ್ದು ಹಾಗೇನಾದರೂ ನಂಬಿದರೆ ಜನ ನಿಮ್ಮನು ನಂಬುವುದಿಲ್ಲ, ಭಸ್ಮವಾಗಿ ಹೋಗುತ್ತೀರಿ. ಕಳೆದ ಒಂದು ವರ್ಷಗಳಿಂದ ಬೀದಿಯಲ್ಲಿ ಬಿದ್ದಿರುವ ಉತ್ತರ ಕರ್ನಾಟಕದ ಜನರ ಸಮಸ್ಯೆಗೆ ಸ್ಪಂದಿಸದ ರಾಜ್ಯ ಸರ್ಕಾರ ಹಾಗೂ ಕೇಂದ್ರದ ಸಂಸದರು ರಾಜಕೀಯ ಲಾಭಕ್ಕಾಗಿ ಬಳಸದೆ ಜನರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಹೇಳಿದರು.