News Karnataka Kannada
Tuesday, April 30 2024
ಮೈಸೂರು

ಬಾಂಬ್ ಇಡಲಾಗಿದೆ ಎಂದು ಅನಾಮದೇಯ ಕರೆ: ಮೈಸೂರಿನಲ್ಲಿ ಸ್ಫೋಟಕ ಮಾದರಿಯ ವಸ್ತುಗಳ ಪತ್ತೆ

Photo Credit :

ಬಾಂಬ್ ಇಡಲಾಗಿದೆ ಎಂದು ಅನಾಮದೇಯ ಕರೆ: ಮೈಸೂರಿನಲ್ಲಿ ಸ್ಫೋಟಕ ಮಾದರಿಯ ವಸ್ತುಗಳ ಪತ್ತೆ

ಮೈಸೂರು: ಅನಾಮದೇಯ ವ್ಯಕ್ತಿಯೊಬ್ಬ ಗ್ರಾಮಾಂತರ ಬಸ್ ನಿಲ್ದಾಣದ ಸಮೀಪ ಪಾರ್ಕ್ ನಲ್ಲಿ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದು, ಸ್ಥಳಕ್ಕೆ ಆಗಮಿದ ಬಾಂಬ್ ನಿಷ್ಕ್ರೀಯ ಧಳ ಕೆಲವು ಸ್ಫೋಟಕ ಮಾದರಿಯ ವಸ್ತುಗಳನ್ನ ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಇದೀಗ ಪೊಲೀಸರು ಪರೀಶಿಲನೆ ಮುಂದುವರೆಸಿದ್ದಾರೆ.

ಇಂದು ಬೆಳಗ್ಗೆ ಪೊಲೀಸ್ ಕಂಟ್ರೋಲ್ ರೂಂಗೆ ಅನಾಮದೇಯ ವ್ಯಕ್ತಿ ಕರೆ ಮಾಡಿ ಗ್ರಾಮಾಂತರ ಬಸ್ ನಿಲ್ದಾಣದ ಮುಂಬಾಗ ಇರುವ ಪಿಪಲ್ಸ್ ಪಾರ್ಕ್ ನಲ್ಲಿ ಬಾಂಬ್ ಇಡಲಾಗಿದೆ ಎಂದು ಕರೆ ಮಾಡಿದ್ದಾನೆ.

ಇದರಿಂದ ತಕ್ಷಣ ಎಚ್ಚೆತ್ತ ಪೊಲೀಸರು ಬಾಂಬ್ ನಿಷ್ಕ್ರೀಯ ಧಳ ಸ್ಥಳಕ್ಕೆ ಆಗಮಿಸಿ ಪರೀಶಿಲನೆ ನಡೆಸುತ್ತಿರುವಾಗ ಎರಡು ಬ್ಯಾಟರಿ ಆಕಾರದ ವಸ್ತು ಹಾಗೂ ವೈರ್ ನಲ್ಲಿ ಸುತ್ತಿಟ್ಟ ಸ್ಪೋಟಕ ಮಾದರಿಯ ವಸ್ತು ಪತ್ತೆಯಾಗಿದೆ. ತಕ್ಷಣ ಶ್ವಾನಗಳ ಸಹಾಯದಿಂದ ಆ ವಸ್ತುವನ್ನ ಪೊಲೀಸರು ಪರೀಶಿಲನೆ ನಡೆಸಿದ್ದು, ಸಂಶಾಯಸ್ಪದ ವಸ್ತುಗಳನ್ನ ವಶಕ್ಕೆ ಪಡೆದು ಹೆಚ್ಚಿನ ಮಾಹಿತಿಗಾಗಿ ವಶ ಪಡಿಸಿಕೊಂಡಿರುವ ಮಾದರಿಗಳನ್ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಜೊತೆಗೆ ಬಸ್ ನಿಲ್ದಾಣ ಸೇರಿದಂತ ಪಾರ್ಕ್ ನ ಸುತ್ತ ಮುತ್ತ ಪೊಲೀಸರು ಹಾಗೂ ಶ್ವಾನ ಧಳದ ಸಹಾಯದೊಂದಿಗೆ ಪರೀಶಿಲನೆ ನಡೆಸುತ್ತಿದ್ದಾರೆ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
181

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು