News Karnataka Kannada
Saturday, May 18 2024
ಮೈಸೂರು

ಪಾಲಿಕೆಯ ಸದಸ್ಯನಿಂದ ಅಧಿಕಾರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ… ದೂರು ದಾಖಲು

Photo Credit :

ಪಾಲಿಕೆಯ ಸದಸ್ಯನಿಂದ ಅಧಿಕಾರಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದನೆ... ದೂರು ದಾಖಲು

ಮೈಸೂರು:  ಅನುಮತಿ ಪಡೆಯದ ರಸ್ತೆ ಕಾಮಾಗಾರಿಗೆ ಬಿಲ್ ಪವಾತಿಗೆ ಸಹಿ ಹಾಕುವಂತೆ ಪಾಲಿಕೆಯ ಅಧಿಕಾರಿಗಳಿಗೆ ಫೋನ್ ದಮ್ಕಿ ಹಾಕಿದ ಮೈಸೂರು ನಗರಪಾಲಿಕೆ ಜೆಡಿಎಸ್ ಸದಸ್ಯನ ವಿರುದ್ದ ಅಧಿಕಾರಿ ನಜರ್ ಬಾದ್ ಠಾಣೆಯಲ್ಲಿ ದೂರು ನೀಡಿರುವ ಘಟನೆ ನಡೆದಿದೆ.

ಏನಿದು ಘಟನೆ?
ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿಯ ವಾರ್ಡ್ ನಂ.57 ರ ಸದಸ್ಯ ನಟರಾಜ್ ಎಂಬವರು ಮಹಾನಗರ ಪಾಲಿಕೆಯ ಅಭಿವೃದ್ಧಿ ಅಧಿಕಾರಿ  ನಿಂಗಾ ಶೆಟ್ಟಿ ಎಂಬವರಿಗೆ ಅನುಮತಿ ಪಡೆಯದೆ ರಸ್ತೆ ಕಾಮಗಾರಿಯನ್ನ ಮಾಡಿ ಅದರ ಬಿಲ್ ಗೆ ಸಹಿ ಹಾಕುವಂತೆ ಅಧಿಕಾರಿಗೆ ಕೇಳಿದ್ದು, ಅಧಿಕಾರಿ ಆ ರಸ್ತೆಯ ಕಾಮಾಗಾರಿಗೆ ಅನುಮತಿಯೇ ಪಡಿದಿಲ್ಲ ನಿಮಗೆ ಕಾಮಾಗಾರಿ ಮಾಡಲು ಹೇಳಿದ್ಯಾರು. ನಾನು ಸಹಿ ಮಾಡುವುದಿಲ್ಲ ಎಂದು ಹೇಳಿ ರಸ್ತೆ ಕಾಮಾಗಾರಿಯನ್ನ ನಿಲ್ಲಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಪಾಲಿಕೆಯ ಸದಸ್ಯೆ ನಟರಾಜ ಅಧಿಕಾರಿಗೆ ಮೊಬೈಲ್ ನಲ್ಲಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.

ಇದ್ದರಿಂದ ಮನನೊಂದ ಅಧಿಕಾರಿ ನಿಂಗರಾಜ ಶೆಟ್ಟಿ ಪಾಲಿಕೆಯ ಸದಸ್ಯನ ವಿರುದ್ದ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಹಾಕಿದ ಪ್ರಕರಣವನ್ನ ನಜರ್ ಬಾದ್ ಠಾಣೆಯಲ್ಲಿ ಇಂದು ದಾಖಲಿಸಿದ್ದಾನೆ.

ಪಾಲಿಕೆಯ ನೌಕರಿಂದ ಪ್ರತಿಭಟನೆ:
ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವ್ಯಚ್ಯ ಶಬ್ದಗಳಿಂದ ನಿಂದಿಸಿದ ಪಾಲಿಕೆಯ ಜೆಡಿಎಸ್ ಸದಸ್ಯ ನಟರಾಜ ವಿರುದ್ದ ಘೋಷಣೆ ಕೂಗಿ ಪಾಲಿಕೆಯ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಬೇಕೆಂದು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಆಗಮಿಸಿದ ಮೇಯರ್ ರವಿಕುಮಾರ್ ಮನವಿ ಸ್ವೀಕರಿಸಿ ಇಬ್ಬರನ್ನ ಕರೆಸಿ ಮಾತುಕತೆ ನಡೆಸಿ ಸಮಸ್ಯೆ ಬಗೆ ಹರಿಸುವುದಾಗಿ ಹೇಳಿದರು.

ಈ ಸಂಧರ್ಭದಲ್ಲಿ ಮಾತನಾಡಿದ ಅಧಿಕಾರಿ ನಿಂಗಶೆಟ್ಟಿ ಮಾತನಾಡಿ ಅನುಮತಿ ಪಡೆಯದೆ ಕಾಮಾಗಾರಿ ನಡೆಸಿ ಬಿಲ್ ಗೆ ಸಹಿ ಹಾಕುವಂತೆ ಒತ್ತಡ ಹಾಕಿದ್ದು ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಹೇಳಿದ್ದಕ್ಕೆ ನನಗೆ ಸದಸ್ಯೆ ನಟರಾಜ್ ಫೋನ್ ನಲ್ಲಿ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಹೇಳಿದರು.

ಪಾಲಿಕೆ ಸದಸ್ಯರೆ ಗುತ್ತಿಗೆ ದಾರರು: ಮೈಸೂರು ಮಹಾನಗರ ಪಾಲಿಕೆಯ ಸದಸ್ಯೆರು ಯಾವುದೇ ಗುತ್ತಿಗೆಗಳನ್ನ ತಮ್ಮ ಹೆಸರಿನಲ್ಲಿ ಮಾಡುವಂತಿಲ್ಲ. ಆದರೆ ಬೇರೆ ಬೇರೆ ಗುತ್ತಿಗೆದಾರರ ಹೆಸರಿನಲ್ಲಿ ಕ್ಯೋಟ್ಯಾಂತರ ರೂಪಾಯಿ ಕಾಮಾಗಾರಿಗಳನ್ನ ಪಾಲಿಕೆ ಸದಸ್ಯರೇ ಮಾಡುತ್ತಿದ್ದು, ಕ್ಯೋಟ್ಯಾಂತರ ರೂಪಾಯಿ ಅವ್ಯಾವಹಾರ ನಡೆದಿದೆ ಎಂದು  ಆಡಿಟರ್  ವರದಿಯಲ್ಲಿಯೇ ನಮೂದನೆಯಾಗಿದ್ದು ನರ್ಮ್ ಯೋಜನೆಯಲ್ಲಿ ಬಂದ ಕೇಂದ್ರ ಸರ್ಕಾರದ ಎರಡು ಸಾವಿರ ಕೋಟಿಗೂ ಹೆಚ್ಚು ಹಣದ ಖರ್ಚಿನ ವಿವರವನ್ನು ಪಾಲಿಕೆಯಲ್ಲಿ ನೀಡಿಲ್ಲ. ಇದರಿಂದಲೇ ಕೇಂದ್ರ ಸರ್ಕಾರದ ಸ್ಮಾರ್ಟ ಸಿಟಿ ಯೋಜನೆ ಕೈ ತಪ್ಪಲು ಕಾರಣ ಎಂದು ಪಾಲಿಕೆಯ ಹೆಸರನ್ನಳದ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು