ಮೈಸೂರು: ಪಾರ್ಕ್ ನಲ್ಲಿ ಸಿಕ್ಕ ವಸ್ತು ಬಾಂಬ್ ಅಲ್ಲ, ಅದು ಪವರ್ ಬ್ಯಾಂಕ್ ಇದರ ಬಗ್ಗೆ ತಪ್ಪು ಪ್ರಚಾರ ಆಗಿದೆ. ಜನತೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ನಗರ ಪೊಲೀಸ್ ಕಮಿಷನರ್ ಡಾ.ಸುಬ್ರಮಣೇಶ್ವರ ರಾವ್ ಸ್ಪಷ್ಟನೆ ನೀಡಿದ್ದಾರೆ.
ಇಂದು ಬೆಳಗ್ಗೆ ನಗರದ ಗ್ರಾಮಾಂತರ ಬಸ್ ನಿಲ್ದಾಣದ ಮುಂಭಾಗದ ಪೀಪಲ್ಸ್ ಪಾರ್ಕ್ ನಲ್ಲಿ ಬಾಂಬ್ ರೀತಿಯ ವಸ್ತು ಪತ್ತೆಯಾಗಿದೆ ಎಂಬ ಬಗ್ಗೆ ತಪ್ಪು ಪ್ರಚಾರವಾಗಿದೆ. ಸ್ಥಳೀಯ ಆಟೋ ಚಾಲಕರು ಅನುಮಾನಸ್ಪದ ವಸ್ತು ಇರುವ ಬಗ್ಗೆ ನಮ್ಮ ಇಲಾಖೆಯ ಸಿಬ್ಬಂದಿಗೆ ತಿಳಿಸಿದ್ದಾರೆ.
ನಂತರ ನಮ್ಮ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ರವಾನೆಯಾಗಿದ್ದು, ತಕ್ಷಣ ನಮ್ಮ ತಂಡ ಹಾಗೂ ಬಾಂಬ್ ಪತ್ತೆ ಧಳ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಆ ವಸ್ತುವನ್ನ ವಶಪಡಿಸಿಕೊಂಡೆವೆ. ಎಲ್ಲಾ ಬ್ಯಾಟರಿ ಹಾಗೂ ಸರ್ಕೂಟ್ ನ್ನ ನಿಷ್ಕ್ರೀಯಗೊಳಿಸಿ ನಂತರ ಪರೀಕ್ಷೀಸಿದಾಗ ಇದೊಂದು 50 ಬ್ಯಾಟರಿ ಜೋಡಣೆ ಇರುವ ಪವರ್ ಬ್ಯಾಂಕ್ ಆಗಿದೆ.
ಈ ವಸ್ತುಗಳು ಬಾಂಬ್ ತರಹ ಯಾವುದೇ ಹೋಲಿಕೆ ಇಲ್ಲ. ಆದರೆ ಆ ವಸ್ತುಗಳನ್ನು ಏಕೆ ಎಸೆದರು ಎಂಬುದು ತಿಳಿದಿಲ್ಲ. ಒಂದು ವೇಳೆ ಭಯ ಹುಟ್ಟಿಸಲು ಮಾಡಿದ್ದರೆ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದರು.
ಇನ್ನೂ ಗದಗದಲ್ಲಿ ಉಗ್ರರ ಭಯದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಈ ಬಗ್ಗೆ ಆತನ ಹೇಳಿಕೆಯನ್ನ ತನಿಖಾಧಿಕಾರಿಗಳು ದಾಖಲಿಸಿಕೊಂಡಿದ್ದು, ತನಿಖೆ ಪ್ರಗತಿಯಲ್ಲಿದೆ.
ಆಂತಕ ಪಡುವ ವಿಷಯವಿಲ್ಲ ಎಂದ ಪೊಲೀಸ್ ಕಮಿಷನರ್ ಹೊಸ ವರ್ಷವನ್ನ ಮೈಸೂರಿನ ಜನತೆ ಯಾವುದೇ ಆತಂಕವಿಲ್ಲದೆ ಆಚರಿಸಬಹುದು. ಇದಕ್ಕೆ ಸಂಬಂಧಿಸಿದಂತೆ ಬೀಗಿ ಪೊಲೀಸ್ ಬಂದೂಬಸ್ತ್ ಏರ್ಪಡಿಸಲಾಗುವುದು ಎಂದರು.