News Karnataka Kannada
Friday, May 17 2024
ಮೈಸೂರು

ಪರಮೇಶ್ವರ ರಾಜೀನಾಮೆ ಇಂದು ಅಂಗೀಕಾರ: ಸಿಎಂ ಸಿದ್ದರಾಮಯ್ಯ

Photo Credit :

ಪರಮೇಶ್ವರ ರಾಜೀನಾಮೆ ಇಂದು ಅಂಗೀಕಾರ: ಸಿಎಂ ಸಿದ್ದರಾಮಯ್ಯ

ಮೈಸೂರು: ಗೃಹ ಸಚಿವ ಪರಮೇಶ್ವರ ಅವರ ರಾಜೀನಾಮೇಯನ್ನ ರಾಜ ಭವನಕ್ಕೆ ಕಳುಹಿಸಿದ್ದೇವೆ, ಇಂದು ಅಂಗೀಕಾರವಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.

ಇಂದು ನಗರದ ಟಿ.ಕೆ ಲೇಔಟ್ ನಲ್ಲಿರುವ ಮುಖ್ಯಮಂತ್ರಿಗಳ ನಿವಾಸದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್ ರಾಜೀನಾಮೆ ಸಲ್ಲಿಸಿದ್ದಾರೆ, ರಾಜೀನಾಮೆಯನ್ನ ರಾಜಭವನಕ್ಕೆ ಕಳುಹಿಸಿದ್ದೇ ಇಂದು ಅಂಗೀಕಾರವಾಗುತ್ತದೆ ಎಂದು ಹೇಳಿದರು.  

ಇನ್ನೂ ರಾಜ್ಯದಲ್ಲಿ ಮುಂಗಾರು ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗುತ್ತಿಲ್ಲ, ಜೂನ್ ಅಂತ್ಯದ ವೇಳೆಯಲ್ಲಿ ಮಳೆಯಾಗುವ ನಿರೀಕ್ಷೆ ಇದ್ದು, ಮೋಡ ಬಿತ್ತನೆಗೆ ಟೆಂಟರ್ ಕರೆದಿದ್ದೇವೆ ಎಂದ ಸಿಎಂ ನಗರದಲ್ಲಿ ಡೆಂಗ್ಯೂ ಜ್ವರ ಹೆಚ್ಚಾಗುತ್ತಿರುವ ಹಿನ್ನಲ್ಲೆಯಲ್ಲಿ ಅಧಿಕಾರ ಸಭೆ ನಡೆಸಿ ಮುಂಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ.

ಸಿಎಂ ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನ ಅಪ್ಪ ಮಕ್ಕಳ ಪಕ್ಷ ಎಂದು ಕರೆಯುತ್ತಾರೆ, ಆದರೆ ಅವರ ಮಗನನ್ನ ರಾಜಕೀಯಕ್ಕೆ ತರುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ, ನಾನು ರಾಜಕೀಯಕ್ಕೆ ಬಂದು 40 ವರ್ಷಗಳಾಗಿದೆ. ಯಾರಾದರೂ ನನ್ನ ಮಕ್ಕಳು ಎಂಎಲ್ ಎ ಗಳಾಗಿದ್ದಾರಾ, ಆದರೆ ದೇವೇಗೌಡರ ಮನೆಯಲ್ಲಿ ಎಷ್ಟು ಜನ ಅಧಿಕಾರದಲ್ಲಿದ್ದಾರೆ ಇದರಿಂದ ಯಾವುದು ಅಪ್ಪ ಮಕ್ಕಳ ಪಕ್ಷ ಅಂತ ಎಲ್ಲರಿಗೂ ತಿಳಿದಿದೆ ಎಂದರು.

ಮಾಜಿ ಸಿಎಂ ಬಿಎಸ್ ವೈ ಒಬ್ಬ ಸುಳ್ಳುಗಾರ, ಅವರ ಹೇಳಿಕೆಗಳಿಗೆ ಉತ್ತರ ಕೊಡುತ್ತಾ ಕೂರಲು ಸಾಧ್ಯವಿಲ್ಲ ಎಂದ ಸಿಎಂ ಇಂದು ರೈತರ ಸಾಲ ಮನ್ನ ಆದೇಶ ಹೊರಡಿಸುತ್ತೇನೆ. ಸಚಿವ ಸಂಪುಟವನ್ನ ಶೀಘ್ರದಲ್ಲೇ ವಿಸ್ತರಣೆ ಮಾಡುತ್ತೇನೆ, ನಿಮಗೆ ಹೇಳಿ ಸಚಿವ ಸಂಪುಟ ವಿಸ್ತರಣೆ ಮಾಡಲು ಎಂದು ಪತ್ರಕರ್ತರಿಗೆ ತಿರುಗೇಟು ನೀಡಿದರು.  

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು