News Karnataka Kannada
Thursday, May 02 2024
ಮೈಸೂರು

ಜ್ವಾಲಮುಖಿ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನದ ಸಮೀಪ ಮದ್ಯದಂಗಡಿ ತೆರವು ವಿರೋಧಿಸಿ ಗ್ರಾಮಸ್ಥರ ಪ್ರತಿಭಟನೆ

Liquor lovers' association writes to CM, asks him not to hike liquor prices
Photo Credit :

ಮೈಸೂರು: ಚಾಮುಂಡಿಬೆಟ್ಟದ ವ್ಯಾಪ್ತಿಗೆ ಬರುವ ಉತ್ತನಹಳ್ಳಿ ಗ್ರಾಮದಲ್ಲಿರುವ ಜ್ವಾಲಮುಖಿ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನದ ಸಮೀಪ ಮದ್ಯದಂಗಡಿ ತೆರೆಯುವುದನ್ನು ವಿರೋಧಿಸಿ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿದರು.
ಮದ್ಯದಂಗಡಿ ತೆರೆಯುವ ಸ್ಥಳದ ಮುಂದೆ ಜಮಾಯಿಸಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿದಿನ ಹೆಚ್ಚಿನ ಸಂಖ್ಯೆಯ ಜನರು ದೇವಾಲಯಕ್ಕೆ ಪೂಜೆಗೆ ಬರುತ್ತಾರೆ. ಹೀಗಿರುವಾಗ ದೇವಸ್ಥಾನದ ಕಮಾನ್‌ಗೇಟ್ ಬಳಿಯೇ ಮದ್ಯದಂಗಡಿ ತೆರೆಯುವುದು ಸರಿಯಲ್ಲ. ಇದರಿಂದ ದೇವಾಲಯಕ್ಕೆ ಬರುವ ಜನರಿಗೆ ತೊಂದರೆಯಾಗುತ್ತದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಮದ್ಯದಂಗಡಿಯನ್ನು ತೆರೆಯಲು ಪರವಾನಗಿ ನೀಡಬಾರದು ಎಂದು ಗ್ರಾಮಸ್ಥರು ಜಿಲ್ಲಾಡಳಿ, ಅಬಕಾರಿ ಇಲಾಖೆ ಹಾಗೂ ಮುಜರಾಯಿ ಇಲಾಖೆಗೆ ಮನವಿ ಮಾಡಿದ್ದಾರೆ.

ಎಪಿಎಂಸಿ ಅಧ್ಯಕ್ಷ ಬಸವರಾಜು, ಉತ್ತನಹಳ್ಳಿ ಕೆ.ಶಿವಣ್ಣ, ಗ್ರಾಪಂ ಮಾಜಿ ಸದಸ್ಯರಾದ ಶಿವಬೀರ, ರಂಗಸ್ವಾಮಿ, ಬಸವರಾಜು, ಲಿಂಗರಾಜು, ಪಿಯು ಕಾಲೇಜು ಪ್ರಾಂಶುಪಾಲ ನಂಜುAಡಸ್ವಾಮಿ, ಗ್ರಾಮಸ್ಥರಾದ ದೇವರಾಜು, ಕುಳ್ಳೇಗೌಡ, ಜಿ.ಗೋಪಿ, ಚಿಕ್ಕವೀರಯ್ಯ, ಹೆಬ್ಬಾಳೆಗೌಡ, ಗುಡ್ಡಪ್ಪ ಶಿವಣ್ಣ, ಶಿವರಾಮು, ಅಶ್ವಿನಿ ರೇವಣ್ಣ, ಯಶವಂತಕುಮಾರ್, ಪಿ.ರಾಜು, ಅಣ್ಣಪ್ಪ, ಮಂಜು, ಪಂಟಿ, ಏಳಿಗೆಹುಂಡಿ ಶಿವಣ್ಣ, ಡಿ.ಚಂದ್ರ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು