News Karnataka Kannada
Friday, May 17 2024
ಮೈಸೂರು

ಗೌತಮ ಕ್ಷೇತ್ರದಲ್ಲಿ ಸಿಲುಕಿಕೊಂಡಿದ್ದ ಯುವಕನ ರಕ್ಷಣೆ

Photo Credit :

ಗೌತಮ ಕ್ಷೇತ್ರದಲ್ಲಿ ಸಿಲುಕಿಕೊಂಡಿದ್ದ ಯುವಕನ ರಕ್ಷಣೆ

ಶ್ರೀರಂಗಪಟ್ಟಣ: ಕೃಷ್ಣರಾಜಸಾಗರ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಹರಿಸಿದ್ದರಿಂದ ಗೌತಮ ಕ್ಷೇತ್ರದಲ್ಲಿ ಶ್ರೀ ಗಜಾನನ ಸ್ವಾಮೀಜಿ ಜೊತೆ ಆಶ್ರಯ ಪಡೆದಿದ್ದ ಯುವಕನನ್ನು ಆತನ ಕುಟುಂಬದವರೇ ರಕ್ಷಿಸಿದ್ದಾರೆ.

ಪಾಂಡವಪುರ ತಾಲೂಕಿನ ಜಯಂತಿನಗರದ ಚೇತನ್ ಎಂಬ ಯುವಕನನ್ನು ಆತನ ತಾಯಿ ಹಾಗೂ ಕುಟುಂಬಸ್ಥರು ರಕ್ಷಣೆ ಮಾಡಿದ್ದಾರೆ.

ತನ್ನ ಸ್ನೇಹಿತನ ಹುಟ್ಟುಹಬ್ಬವನ್ನು ಕಾವೇರಿ ನದಿಯ ನಡುಗಡ್ಡೆಯಲ್ಲಿರುವ ಗೌತಮ ಕ್ಷೇತ್ರದಲ್ಲಿ ಆಚರಿಸಲು ಚೇತನ್ ತನ್ನ ಇಬ್ಬರು ಸ್ನೇಹಿತರೊಂದಿಗೆ ಶನಿವಾರ ತೆರಳಿದ್ದರು. ಆದರೆ ಕೆ.ಆರ್.ಎಸ್.ನಿಂದ ನದಿಗೆ ದಿಢೀರ್ ನೀರು ಬಿಟ್ಟ ಹಿನ್ನೆಲೆಯಲ್ಲಿ ಈತನ ಇಬ್ಬರು ಸ್ನೇಹಿತರು ಈಜಿ ದಡ ಸೇರಿದ್ದರು. ಆದರೆ ಈಜು ಬಾರದ ಚೇತನ್ ಗೌತಮ ಕ್ಷೇತ್ರದಲ್ಲೇ ಶ್ರೀ ಗಜಾನನ ಸ್ವಾಮೀಜಿ ಜೊತೆ ಸೇರಿಕೊಂಡಿದ್ದನು.

ಈ ವಿಚಾರ ತಿಳಿದ ಚೇತನ್ ತಾಯಿ ಸ್ಥಳೀಯ ಮೀನುಗಾರರ ಸಹಾಯ ಪಡೆದು ತಮ್ಮ ಮಗನನ್ನು ಆಶ್ರಮದಿಂದ ವಾಪಸ್ ಕರೆಸಿಕೊಂಡರು. ನದಿಯಲ್ಲಿ ಇನ್ನೂ ಪ್ರವಾಹ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕುಟುಂಬ ಆತಂಕಕ್ಕೆ ಒಳಗಾಗಿತ್ತು.

ಮೀನುಗಾರರು ಆಶ್ರಮಕ್ಕೆ ತೆಪ್ಪ ಮೂಲಕ ತೆರಳಿ, ಅಲ್ಲಿದ್ದ ಚೇತನ್ನನ್ನು ಕರೆದುಕೊಂಡು ಬರುತ್ತಿದ್ದಂತೆ ಆತನ ತಾಯಿ ಮಗನನ್ನು ಕಂಡು ಭಾವುಕರಾದರು.

ಇನ್ನು ಯುವಕ ಚೇತನ್ ಹೇಳುವ ಪ್ರಕಾರ, ಕಾವೇರಿ ನದಿಯಲ್ಲಿ ಇನ್ನೂ ನೀರು ಬಂದರೂ ಆಶ್ರಮಕ್ಕೆ ಏನೂ ಆಗುವುದಿಲ್ಲ. ಸ್ವಾಮೀಜಿ ಸೇರಿದಂತೆ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು