ಮೈಸೂರು: ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಗೆ ವ್ಯಾಪ್ತಿಗೆ ಬರುವ ಬೆಟ್ಟದೂರು ಗ್ರಾ.ಪಂ.ಯ ಶ್ರೀ ಗೊಮ್ಮಟಗಿರಿಯ ಬೆಟ್ಟದಲ್ಲಿ ಜೈನರ ಆರಾಧ್ಯ ದೈವ ವಿರಾಜಮಾನವಾಗಿರುವ ಗೊಮ್ಮಟೇಶ್ವರನಿಗೆ 66ನೇ ವರ್ಷದ ಮಸ್ತಕಾಭಿಷೇಕ ಪೂಜಾ ಮಹೋತ್ಸವವ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವೈಭವದಿಂದ ನೆರವೇರಿತು.
ಶಾಸ್ತ್ರೋಕ್ತವಾಗಿ ನಡೆದ ಒಂದೊಂದು ಅಭಿಷೇಕಗಳಲ್ಲೂ ಗೊಮ್ಮಟ ಒಂದೊಂದು ವಿಧವಾಗಿ ಕಂಗೊಳಿಸುತ್ತಿತ್ತು, ಭಕ್ತರು ಸಂಭ್ರಮ, ಉದ್ಘೋಷ ಮುಗಿಲು ಮುಟ್ಟಿತು. ಮೈಸೂರು ಜಿಲ್ಲೆಯ ವಿವಿಧ ಗ್ರಾಮಗಳಿಂದ ಅಪಾರ ಭಕ್ತಾಧಿಗಳು, ವಿವಿಧ ಜೈನ ಸಮುದಾಯದವರು, ಸಂಘಗಳ ಪದಾಧಿಕಾರಿಗಳು, ಕಾರ್ಯಕರ್ತರು ಅಪಾರ ಸಂಖ್ಯೆಯಲ್ಲಿ ಈ ಉತ್ಸವದಲ್ಲಿ ಭಾಗವಹಿಸಿದ್ದರು.
ವಿವಿಧ ಸಂಘಗಳವರು ಭಕ್ತಾಧಿಗಳಿಗೆ ಪ್ರಸಾದ, ತಂಪು ಪಾನೀಯ ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಹಲವಾರು ಜೈನ ಬಸದಿಯ ಜೈನ ಮುನಿಗಳೂ ಕೂಡಾ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.