ಮಂಡ್ಯ: ಕರ್ನಾಟಕ ರಾಜ್ಯದಲ್ಲಿರುವ ಖಾಸಗಿ ಶಾಲೆ ಗಳ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಮುಖ್ಯಸ್ಥರು ಮತ್ತು ಶಿಕ್ಷಕರು ಮಂಗಳವಾರ ಬೆಂಗಳೂರು ಚಲೋ ಪ್ರತಿಭಟನೆಗೆ ಮಂಡ್ಯ ನಗರ ಮತ್ತು ತಾಲೂಕುಗಳಿಂದ ಬೆಳಗ್ಗೆ ತೆರಳಿದರು.
ನಗರದ ನೆಹರು ನಗರದಲ್ಲಿರುವ ಡ್ಯಾಫೋಡಿಲ್ಸ್ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಪ್ರತಿಭಟನಾಕಾರರು ಜಮಾವಣೆಗೊಂಡು ಖಾಸಗಿ ಶಾಲೆಗಳನ್ನು ಕಡೆಗಣಿಸುತ್ತಿರುವ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಜಿಲ್ಲಾ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ಮುಖ್ಯಸ್ಥರಾದ ಸುಜಾತಾ ಕೃಷ್ಣ ಅವರು ಕೋವಿಡ್ 19 ಮಾರ್ಗಸೂಚಿ ಅನ್ವಯ ಖಾಸಗಿ ಶಾಲಾ ಶಿಕ್ಷಕರ ಆಡಳಿತ ಮಂಡಳಿಯವರ ಬದುಕು ದುಸ್ತರವಾಗಿದೆ ಗಾಯದ ಮೇಲೆ ಬರೆ ಎಳೆದಂತೆ ಸರ್ಕಾರ ದಿನಕ್ಕೊಂದು ಅನುಸರಿಸುತ್ತಿರುವ ಧೋರಣೆ ಶಿಕ್ಷಣ ಮಂತ್ರಿಗಳ ಹೇಳಿಕೆಗಳಿಂದಾಗಿ ಶಿಕ್ಷಕರ ಬದುಕು ಬೀದಿಗೆ ಬಂದಿದೆ ಎಂದು ತಮ್ಮ ಆತಂಕವನ್ನು ವ್ಯಕ್ತಪಡಿಸಿದರು.
ಶಿಕ್ಷಣ ಮಂತ್ರಿಗಳು ಹೇಳಿರುವ ಶೇ.30ರಷ್ಟು ಬೋಧನಾ ಶುಲ್ಕ ಕಡಿತ ಅವೈಜ್ಞಾನಿಕವಾಗಿದೆ. ಅಷ್ಟೆ ಅಲ್ಲದೆ ಖಾಸಗಿ ಶಿಕ್ಷಣ ಸಂಸ್ಥೆಗಳ ಆರಾರು ಸಮಸ್ಯೆ ಆರ್ ಟಿ ಈ ಹಣ ಬಿಡುಗಡೆಯಲ್ಲಿ ಸರ್ಕಾರ ವಿಳಂಬ ತೋರುತ್ತಿದೆ. ಆರ್ಟಿಕಲ್ 371ರಿ ಎನ್ ಒಸಿ ಪಿಡಬ್ಲ್ಯುಡಿ ಸರ್ಟಿಫಿಕೇಷನ್ ಈ ಎಲ್ಲ ಸಮಸ್ಯೆಗಳ ಪರಿಹಾರ ಬಯಸಿ ಕ್ಯಾಮ್ಸ್ ಇತರೆ ಸಂಘಟನೆಗಳೊಡಗೂಡಿ ಫೆ.23ರಂದು ಬೆಂಗಳೂರು ಚಲೋ ಎಂಬ ಬೃಹತ್ ಪ್ರತಿಭಟನೆಯನ್ನು ಬೆಂಗಳೂರು ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ವರೆಗೂ ಮೆರವಣಿಗೆಯನ್ನು ಹಮ್ಮಿಕೊಂಡಿದ್ದೇವೆ ಎಂದರು.
ಕರ್ನಾಟಕಾದ್ಯಂತ ಇಪ್ಪತ್ತೈದು ಸಾವಿರಕ್ಕೂ ಹೆಚ್ಚು ಮೀರಿ ಸಂಖ್ಯೆಯಲ್ಲಿ ಶಾಲಾ ಮುಖಂಡರು ಭಾಗವಹಿಸುವ ನಿರೀಕ್ಷೆಯಿದೆ. ಪ್ರತಿಭಟನೆಯಲ್ಲಿ ಮಂಡ್ಯ ಜಿಲ್ಲಾ ಕ್ಯಾಮ್ಸ್ ಸಂಘಟನೆಯ ಸದಸ್ಯ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಪ್ರತಿಭಟನೆ ತೀವ್ರಗೊಳಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಖಾಸಗಿ ಶಾಲಾ ಆಡಳಿತ ಮಂಡಳಿ ಶಿಕ್ಷಕರು ಮತ್ತು ಮುಖ್ಯ ರೈಲು ಬಸ್ಸುಗಳು ಹಾಗೂ ಕಾರಿನ ಮೂಲಕ ಪ್ರತಿಭಟನೆಗೆ ತೆರಳಿದರು.