ಮೈಸೂರು: ಒಂದೇ ಕುಟುಂಬದ ಮೂರು ಜನ ಕಬಿನಿ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಕೇರಳ ಗಡಿ ಭಾಗದ ಹೆಗ್ಗಡದೇವನಕೋಟೆ ತಾಲೂಕಿನ ಗೋಳೂರು ಮಸೀದಿ ಬಳಿ ನಡೆದಿದೆ.
ಮೃತರನ್ನು ಕೇರಳದ ಕಬಿನಿಗಿರಿ ನಿವಾಸಿಗಳಾದ ಚಾಲಕಲ್ ಬೇಬಿ (53)ಅವರ ಪುತ್ರ ಅಜಿತ್ (24) ಹಾಗೂ ಅವರ ಪುತ್ರಿ ಅನಿತಾ (18) ಎಂದು ಗುರುತಿಸಲಾಗಿದೆ. ಕಬಿನಿ ಹಿನ್ನೀರಿನಲ್ಲಿ ಸ್ನಾನಕ್ಕೆ ಅಂತ ಇಳಿದ ಸಂದರ್ಭದಲ್ಲಿ ಅನಿತಾ ಜಾರಿ ಬಿದ್ದಾಗ ರಕ್ಷಿಸಲು ತೆರಳಿದ್ದ ವೇಳೆ ಉಳಿದಿಬ್ಬರು ನೀರು ಪಾಲಾಗಿದ್ದಾರೆ.
ತಕ್ಷಣ ಮಾಹಿತಿ ತಿಳಿದು ಕಾರ್ಯಾಚರಣೆ ನಡೆಸಿ ಶವಗಳನ್ನು ಮೇಲಕ್ಕೆತ್ತಲಾಗಿದ್ದು, ಕೇರಳದ ಪಲಪ್ಪುಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.