ಮೈಸೂರು: ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕೊಡುವ 2016-17 ನೇ ಸಾಲಿನ ಕನ್ನಡ ಮಾಧ್ಯಮ ಪ್ರಶಸ್ತಿಗೆ ಮೈಸೂರಿನ ವಿದ್ಯಾರ್ಥಿನಿ ಆಯ್ಕೆಯಾಗಿದ್ದಾಳೆ.
ನಗರದ ಕ್ರೈಸ್ಟ್ ದಿ ಕಾನ್ವೆಂಟ್ ಶಾಲೆಯ ವಿಧ್ಯಾರ್ಥಿ ಎಂ. ಸಹನ ಆಯ್ಕೆಯಾಗಿದ್ದಾಳೆ. ಹಾಸನ ಜಿಲ್ಲೆಯ ಮಲ್ನಾಡ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಡಿ.25 ರಂದು ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ. ಕಳೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ತಾಲ್ಲೋಕು ಮಟ್ಟದಲ್ಲಿ ತೃತಿಯ ಸ್ಥಾನ ಪಡೆದುಕೊಂಡಿದ್ದರು, ಹೀಗಾಗಿ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು ಆಯ್ಕೆ ಮಾಡಿ ಸಲ್ಲಿಸಿ ಪಟ್ಟಿಯ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಪ್ರಾಧಿಕಾರ ತಿಳಿಸಿದೆ.
ಪ್ರಶಸ್ತಿಯು ನಗದು ಬಹುಮಾನ, ಸ್ಮರಣಫಲಕ, ಪ್ರಶಸ್ತಿಪತ್ರ, ಪೆನ್ಸೆಟ್, ಕನ್ನಡ-ಕನ್ನಡ ಕನ್ನಡ-ಇಂಗ್ಲೀಷ್ ನಿಘಂಟು, ಶಾಲಾಬ್ಯಾಗ್, ಕೈಗಡಿಯಾರನ್ನು ಒಳಗೊಂಡಿದೆ ಈ ವಿಧ್ಯಾರ್ಥಿನಿಯು ಮೈಸೂರು ನಗರಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಲಕ್ಷೀದೇವಿ ಮಹದೇವ ದಂಪತಿರವರ ಪ್ರುತ್ರಿಯಾಗಿದ್ದಾರೆ.