ಮೈಸೂರು: ಕಂಬಳಕ್ಕೆ ಇದೇ ತಿಂಗಳ 25ರೊಳಗೆ ಮೋದಿ ಸರ್ಕಾರ ಅನುಮತಿ ನೀಡದಿದ್ದರೆ ಜನವರಿ 25ರಂದು ರಾಜಭವನ ಮುತ್ತಿಗೆ ಫೆಬ್ರವರಿ 18 ಕರ್ನಾಟಕ ಬಂದ್ ಗೆ ಕರೆ ನೀಡಿರುವುದಾಗಿ ಕನ್ನಡ ಚುಳುವಳಿಗಾರ ವಾಟಳ್ ನಾಗಾರಜ್ ಮೈಸೂರಿನಲ್ಲಿ ಗುಡಿಗಿದ್ದಾರೆ.
ಕರ್ನಾಟಕದ ದಕ್ಷಿಣ ಕನ್ನಡದ ಗ್ರಾಮೀಣ ಕ್ರೀಡೆ ಕಂಬಳಕ್ಕೆ ಇದೇ ತಿಂಗಳ 25 ರಂದು ಕೇಂದ್ರದ ಮೋದಿ ಸರ್ಕಾರ ಸುಗ್ರೀವಾಜ್ಞೆ ಮೂಲಕ ಕಂಬಳ ನಡೆಸಲು ಅನುಮತಿ ನೀಡದಿದ್ದರೆ ಜನವರಿ 25 ರಂದು ಕನ್ನಡ ಹೋರಾಟಗಾರರು ರಾಜಭವನಕ್ಕೆ ಮುತ್ತಿಗೆ ಹಾಕುವ ಮೂಲಕ ರಾಜ್ಯಾಧ್ಯಾಂತ ಉಗ್ರ ಹೋರಾಟವನ್ನ ನಡೆಸಲು ಕನ್ನಡ ಪರ ಸಂಘಟನೆಗಳು ತೀರ್ಮಾನಿಸಿದ್ದು, ಜನವರಿ 25 ರಿಂದ ರಾಜ್ಯಾಧ್ಯಾಂತ ಚಳುವಳಿ ಪ್ರಾರಂಭವಾಗಿ ಫೆಬ್ರವರಿ 18 ರಂದು ಎಲ್ಲಾ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿರುವುದಾಗಿ ಕನ್ನಡ ಪರ ಚಳುವಳಿಗಾರ ವಾಟಾಳ್ ನಾಗರಾಜ್ ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.
ಇಂದು ಮೈಸೂರಿನ ರೈಲ್ವೆ ನಿಲ್ದಾಣದ ಮುಂಭಾಗ ತಮಟೆ ಭಾರಿಸುವ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ವಾಟಾಳ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕದ ಬಗ್ಗೆ ಕಾವೇರಿ, ಕಳಸಾ ಬಂಡೂರಿ ಸೇರಿದಂತೆ ಎಲ್ಲಾ ವಿಚಾರದಲ್ಲೂ ರಾಜ್ಯಕ್ಕೆ ಮಲತಾಯಿ ಧೋರಣೆ ತೆಳೆದಿದ್ದು, ಆದರೆ ತಮಿಳ್ ನಾಡಿಗೆ ಎಲ್ಲಾ ವಿಚಾರದಲ್ಲೂ ಸಹಾಯ ಮಾಡುವ ಮೂಲಕ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿದ್ದು, ಇದನ್ನು ಖಂಡಿಸಿ ರಾಜ್ಯದಿಂದ ಆಯ್ಕೆಯಾಗಿರುವ ಎಲ್ಲಾ ಸಂಸದರು ಕೂಡಲೇ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.