ಮೈಸೂರು: ಅರಮನೆ ಆವರಣದಲ್ಲಿ ಬಿಡು ಬಿಟ್ಟಿರುವ ಮಾವುತ ಕಾವಾಡಿಗರ ಕುಟುಂಬದ ಮುತ್ತೈದೆಯರಿಗೆ ಗೌರಿ ಹಬ್ಬದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಸರ್ವಮಂಗಳ ಶಂಕರ್ ಬಾಗಿನ ನೀಡಿದರು.
ಬಾಗಿನ ನೀಡುವ ಮುನ್ನ ಮಹಿಳೆಯರು ಬಾಗಿನಕ್ಕೆ ಅರಿಶಿಣ, ಕುಂಕುಮ ಇಟ್ಟು ಪೂಜೆ ಸಲ್ಲಿಸಿದ್ದರು. ನಂತರ ಬಾಗಿನದಲ್ಲಿ ಬೆಲ್ಲ, ಕೊಬ್ಬರಿ, ಅಕ್ಕಿ, ಬಳೆ, ತಾಂಬೂಲ ವಿರುವ ಬಾಗಿನವನ್ನು ಮುತ್ತೈದೆಯರಿಗೆ ನೀಡಲಾಯಿತು. ಅಲ್ಲದೆ, ಗೌರಿಗೆ ಪೂಜೆ ಸಲ್ಲಿಸಿ ತದನಂತರ ಬಾಗಿನ ನೀಡಲಾಯಿತು. ನಂತರ ಕಾವಾಡಿಗರು ಹಾಗೂ ಮಾವುತರ ಕುಟುಂಬದವರಿಗೆ ಭೋಜನ ಕೂಟವನ್ನು ಕೂಡ ಏರ್ಪಡಿಸಲಾಗಿತ್ತು