ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಐತಿಹಾಸಿಕ ಪುಣ್ಯಕ್ಷೇತ್ರ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಪೊಳಲಿ ನಾರಾಯಣ ಭಟ್ (78) ಅವರು ಇಂದು ನಿಧನರಾಗಿದ್ದಾರೆ.

ಶ್ರೀ ಕ್ಷೇತ್ರದಲ್ಲಿ ಕಳೆದ 50 ವರ್ಷಗಳಿಗೂ ಹೆಚ್ಚು ಕಾಲ ಅತ್ಯಂತ ಭಕ್ತಿ ಮತ್ತು ನಿಷ್ಠೆಯಿಂದ ದೇವಿಯ ಸೇವೆ ಸಲ್ಲಿಸುತ್ತಿದ್ದ ಅವರು, ಭಕ್ತಾದಿಗಳ ಪಾಲಿಗೆ ಮಾರ್ಗದರ್ಶಕರಾಗಿದ್ದರು.

ದಶಕಗಳ ಕಾಲ ಪವಿತ್ರ ಪೂಜಾ ಕೈಂಕರ್ಯಗಳನ್ನು ಮುನ್ನಡೆಸಿದ್ದ ನಾರಾಯಣ ಭಟ್ ಅವರ ನಿಧನದಿಂದ ಪೊಳಲಿ ಕ್ಷೇತ್ರವು ತನ್ನ ಹಿರಿಯ ಚೇತನವನ್ನು ಕಳೆದುಕೊಂಡಂತಾಗಿದೆ. ಇವರ ಅಗಲಿಕೆಗೆ ರಾಜಕೀಯ ಗಣ್ಯರು, ಧಾರ್ಮಿಕ ನಾಯಕರು ಹಾಗೂ ಸಾವಿರಾರು ಭಕ್ತರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

View this post on Instagram

A post shared by News Karnataka (@newskarnataka)