ಮಂಗಳೂರು: ಎಸ್.ಸಿ.ಎಸ್ ಆಸ್ಪತ್ರೆಯಲ್ಲಿ ಮೇ.16 ರಂದು ಸಾರ್ವಜನಿಕರಲ್ಲಿ ಸರಿಯಾದ ಪೌಷ್ಠಿಕ ಆಹಾರ, ಆರೋಗ್ಯಕರ ಆಹಾರ ಪದ್ಧತಿ ಹಾಗೂ ಆರೋಗ್ಯಕರ ಜೀವನಶೈಲಿಯ ಮಹತ್ವದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಉಚಿತ ಆಹಾರ ಮತ್ತು ಪೌಷ್ಠಿಕತೆ ಜಾಗೃತಿ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ವೈದ್ಯಕೀಯ ಅಧೀಕ್ಷಕರಾದ ಡಾ. ಶಾಲಿನಿ ಎಸ್. ರಾವ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನರ್ಸಿಂಗ್ ಅಧೀಕ್ಷಕರಾದ ಶ್ರೀಮತಿ ಗ್ರೇಸಮ್ಮ ಆಂಟನಿ, ತುರ್ತು ಚಿಕಿತ್ಸಾ ವಿಭಾಗದ ವೈದ್ಯರಾದ ಡಾ. ಮಲ್ಲಿಕಾರ್ಜುನ ಕಮಶೆಟ್ಟಿ, ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ Ms. ದಿವ್ಯ ಡಿ.ಕೆ ಹಾಗೂ ಆಸ್ಪತ್ರೆಯ ಇತರ ಸಿಬ್ಬಂದಿ ಉಪಸ್ಥಿತರಿದ್ದರು.

ಶಿಬಿರದಲ್ಲಿ ಭಾಗವಹಿಸಿದವರಿಗೆ ಸರಿಯಾದ ಆಹಾರ ಯೋಜನೆ ಹಾಗೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಕುರಿತು ಪ್ರೋತ್ಸಾಹ ನೀಡಲಾಯಿತು. ಆಸ್ಪತ್ರೆಯ ತಜ್ಞರ ತಂಡದಿಂದ ವೈಯಕ್ತಿಕ ಆಹಾರ ಚಾರ್ಟ್ಗಳು ಮತ್ತು ತಜ್ಞರ ಸಲಹೆಗಳನ್ನು ಉಚಿತವಾಗಿ ನೀಡಲಾಯಿತು.

ಭಾರತೀಯರಲ್ಲಿ ಜೀವನಶೈಲಿ ಸಂಬಂಧಿತ ರೋಗಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಆರೋಗ್ಯಕರ ಬದಲಾವಣೆಗಳ ಮೂಲಕ ಅವುಗಳನ್ನು ನಿಯಂತ್ರಿಸುವ ಕುರಿತು ಮಾರ್ಗದರ್ಶನ ಪಡೆಯುವುದು ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಸ್.ಸಿ.ಎಸ್ ಆಸ್ಪತ್ರೆಯ ಪೌಷ್ಠಿಕತೆ ಮತ್ತು ಆಹಾರ ವಿಭಾಗವು ಶಿಬಿರದಲ್ಲಿ ವಿಶೇಷವಾಗಿ ಕೆಳಗಿನ ವಿಷಯಗಳ ಕುರಿತು ಮಾರ್ಗದರ್ಶನ ನೀಡಿತು:
•ಹೈಪೊ ಹಾಗೂ ಹೈಪರ್ ಥೈರಾಯ್ಡ್ ಸಮಸ್ಯೆಗಳ ಕುರಿತು ಮಾರ್ಗದರ್ಶನ.
•ತೂಕ ಇಳಿಕೆ ಹಾಗೂ ತೂಕ ಹೆಚ್ಚಿಸುವ ಸಲಹೆಗಳು.
•ಮಧುಮೇಹ ಹಾಗೂ ರಕ್ತದೊತ್ತಡ ಕುರಿತ ಸಮಾಲೋಚನೆ.
•ಚರ್ಮದ ನೈಸರ್ಗಿಕ ಕಾಂತಿ ಮತ್ತು ಕೂದಲಿನ ಆರೋಗ್ಯ ವೃದ್ಧಿಗಾಗಿ ಪೌಷ್ಠಿಕ ಸಲಹೆ.
•ಪಿಸಿಒಡಿ ಮತ್ತು ಪಿಸಿಒಎಸ್ ಸಮಸ್ಯೆಗಳ ಕುರಿತು ಮಾರ್ಗದರ್ಶನ.

ಬಹಳಷ್ಟು ಜನರು ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ಗಳ ವೈಯಕ್ತಿಕ ಸಲಹೆಗಳನ್ನು ಪಡೆದು ಶಿಬಿರದ ಪ್ರಯೋಜನವನ್ನು ಪಡೆದರು. ಸಾರ್ವಜನಿಕರಲ್ಲಿ ಆರೋಗ್ಯ ಜಾಗೃತಿ ಹೆಚ್ಚಿಸುವುದರ ಜೊತೆಗೆ ಉತ್ತಮ ಆರೋಗ್ಯ ಸೇವೆಗಳನ್ನು ವೃದ್ಧಿಸುವ ಉದ್ದೇಶದಿಂದ ಇಂತಹ ಇನ್ನಷ್ಟು ಆರೋಗ್ಯ ಜಾಗೃತಿ ಶಿಬಿರಗಳನ್ನು ಮುಂದಿನ ದಿನಗಳಲ್ಲಿ ಆಯೋಜಿಸುವುದಾಗಿ ಎಸ್.ಸಿ.ಎಸ್ ಆಸ್ಪತ್ರೆ ತಿಳಿಸಿದೆ.