ಮಂಗಳೂರು : ಜ್ಯೋತಿ ಸರ್ಕಲ್ನಲ್ಲಿ ಅಂಬೇಡ್ಕರ್ ಸರ್ಕಲ್ ನಿರ್ಮಿಸಲು ಯೋಗ್ಯತೆ ಇಲ್ಲಾ ಕಾಂಗ್ರೆಸ್ನವರಿಗೆ, ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರಿಗೆ ಗೌರಾರ್ಪಣೆ ಪುಷ್ಪಾರ್ಪಣೆ ಮಾಡಿ ಫೋಟೋ ತೆಗಿತಾರೆ. ಜ್ಯೋತಿ ಸರ್ಕಲ್ನಲ್ಲಿ ಅಂಬೇಡ್ಕರ್ ಸರ್ಕಲ್ ತೆಗೆದಿರುವುದು ಕಾಂಗ್ರೆಸ್ನವರು ಎಂದು ಶಾಸಕ ವೇದವ್ಯಾಸ್ ಕಾಮತ್ ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸಂವಿಧಾನದ ಪುಸ್ತಕ ಹಿಡಿದು ಮಾತನಾಡುತ್ತಿರಿ. ಪುಸ್ತಕ ಕೈನಲ್ಲಿ ಹಿಡಿದರೆ ಪ್ರಯೋಜನವಿಲ್ಲ ಅದು ಹೃದಯದಲ್ಲಿ ಇರಬೇಕು. ಬಿಜೆಪಿ ಜ್ಯೋತಿ ಸರ್ಕಲ್ನಲ್ಲಿ ಸುಧೀರ್ ರವರು ಮೇಯರ್ ಇರುವಾಗ ಗುದ್ದಲಿ ಪೂಜೆ ನಡೆದಿತ್ತು. ಕಾಂಗ್ರೆಸ್ ಅದನ್ನ ಇನ್ನೂ ಕಾರ್ಯರೂಪಕ್ಕೆ ತರ್ಲಿಲ್ಲ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದರು.