ಮಂಗಳೂರು: ಕೋಲಾರದಲ್ಲಿ ಸಿಂಥಟಿಕ್ ಅಡಿಕೆ ಟ್ರಕ್ ಜಪ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಆರೋಗ್ಯ ಸಚಿವ ಯು.ಟಿ.ಖಾದರ್ ಹೇಳಿಕೆ ನೀಡಿದ್ದಾರೆ.
ಪೊಲೀಸರು ವಶಪಡಿಸಿಕೊಂಡಿದ್ದಾರೆ. ತನಿಖೆ ಬಳಿಕ ಸಿಂಥೆಟಿಕ್ ಅಡಿಕೆ ಬಗ್ಗೆ ಮಾಹಿತಿ ಹೊರಬರಲಿದೆ. ಬಾಂಗ್ಲಾದೇಶ, ನೇಪಾಳ ಎಲ್ಲೆಲ್ಲಿಂದಲೂ ಅಡಿಕೆ ಬರುತ್ತೆ. ಗುಟ್ಕಾ ಬ್ಯಾನ್ ಮಾಡುವಂತೆ ನಾನು ಅದಕ್ಕಾಗಿಯೆ ಹೇಳಿದ್ದು ಎಂದರು.
ಅಡಿಕೆ ಬ್ಯಾನ್ ಮಾಡಿ ಅಂದ್ರೆ ಅಡಿಕೆ ಬೆಳೆಗಾರರಿಗೆ ತೊಂದರೆ ಅಂತಾ ಹೇಳಿದ್ರು. ಈಗ ಎಲ್ಲಿಲ್ಲಿಂದಲೂ ಇಂತಹ ಅಡಿಕೆ ಬರುತ್ತಿದೆ. ಇದೆಲ್ಲವನ್ನು ಗಮನದಲ್ಲಿ ಇಟ್ಟುಕೊಡೆ ಗುಟ್ಕಾ ಬ್ಯಾನ್ ಮಾಡಿದ್ದು ಎಂದರು.

