ಶಿವಮೊಗ್ಗ: ಪ್ರಧಾನಿ ಮೋದಿಜಿ, ಅಮಿತ್ ಶಾ, ನಡ್ಡಾ ಅವರು ಕರ್ನಾಟಕದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಈ ಬಾರಿ 140 ಕ್ಕೂ ಹೆಚ್ಚು ಕ್ಷೇತ್ರ ಗೆದ್ದು ಸ್ಪಷ್ಟ ಬಹುಮತ ಬರುತ್ತೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುವ ತೀರ್ಮಾನದಂತೆ ಮುಂದೆ ಹೋಗ್ತಿದ್ದೇವೆ. ರಾಜ್ಯದ ಎಲ್ಲ ಕಡೆ ದೇವದುರ್ಲಭದಂತಹ ಸ್ವಾಗತ ಸಿಗ್ತಾ ಇದೆ. ಯಾರು ನಾನು ಮುಖ್ಯ ಮಂತ್ರಿ ಅಂತ ತಿರುಕನ ಕನಸು ಕಾಣ್ತಿದ್ದಾರೆ, ಅದು ಸಾಧ್ಯವಿಲ್ಲವೆಂದರು.
. ಅವರ ನಾಯಕತ್ವದಲ್ಲಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವಂತಹ ಸಂಕಲ್ಪ ಮತದಾರರು ಮಾಡಬೇಕು. ರಮೇಶ ಜಾರಕಿಹೊಳಿ ಆಡಿಯೊ ಬಹಿರಂಗ ವಿಚಾರದ ಕುರಿತು ಮಾತನಾಡಿದ ಬಿಎಸ್ ವೈ ಅದು ವೈಯುಕ್ತಿಕವಾಗಿ ಸಂಬಂಧಪಟ್ಟ ವಿಷಯ, ನಾನು ಕಮೆಂಟ್ ಮಾಡಲ್ಲ. ನನಗೇನೂ ಎ ಟು ಝಡ್ ಗೊತ್ತಿಲ್ಲವೆಂದರು.
ಇದಕ್ಕೂ ಮೊದಲು ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಡಿಜಿಟಲ್ ವಾಲ್ ಪೇಟಿಂಗ್ ಗೆ ಚಾಲನೆ ನೀಡಿದರು.