News Karnataka Kannada
Thursday, May 02 2024
ಶಿವಮೊಗ್ಗ

ಶಿವಮೊಗ್ಗ: ಚುನಾವಣೆಯಲ್ಲಿ ನಾನು ಮುಂದಿರುವೆ- ಆಯನೂರು ಮಂಜುನಾಥ್

Shivamogga: I am ahead in elections: Ayanur Manjunath
Photo Credit : News Kannada

ಶಿವಮೊಗ್ಗ: ಈ ಚುನಾವಣೆಯ ರೇಸ್ ನಲ್ಲಿ ನಾನು ಮುಂದೆ ಇದ್ದು ನನ್ನ ಹಿಂದೆ ಪ್ರತಿಸ್ಪರ್ಧಿಯಾಗಿ ಯಾರಿದ್ದಾರೆ ಎಂಬುದು ಕಾದು ನೋಡಬೇಕಿದೆ ಎಂದು ಜೆಡಿಎಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಅಭಿಪ್ರಾಯ ಪಟ್ಟಿದ್ದಾರೆ.

ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಚುನಾವಣೆಯಲ್ಲಿ ಗೆಲ್ಲುವ ಅಭ್ಯರ್ಥಿಯಾಗಿ ಮೊದಲ ಸ್ಥಾನದಲ್ಲಿ ನಾನಿದ್ದೇನೆ. ನನ್ನ ಪ್ರತಿಸ್ಫರ್ಧಿಯ ಸ್ಥಾನ ಯಾರಿಗೆ ಎಂಬುದು ನಿರ್ಧಾರವಾಗಬೇಕಿದೆ. ಆದರೆ ನನ್ನ ಪ್ರಕಾರ ಬಿಜೆಪಿ ಅಭ್ಯರ್ಥಿ ಚೆನ್ನಬಸಪ್ಪ ನನ್ನ ಪ್ರತಿಸ್ಪರ್ಧಿಯಾಗ ಬಹುದು ಎಂದು ತಿಳಿದುಕೊಂಡಿದ್ದೇನೆ ಎಂದು ಹೇಳಿದರು.

ನಿನ್ನೆಯ ಸಮಾವೇಶದಲ್ಲಿ ಭಾಷಣ ಅಗಿಯಾದ ಮುಸ್ಲೀಂ ಮತದಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಇದು ಮತವಾಗಿ ಪತಿವರ್ತನೆ ಆದಲ್ಲಿ ಯಾರಿಗೆ ವರವಾಗಲಿದೆ ಮತ್ತು ಯಾರಿಗೆ ಶಾಪವಾಗಲಿದೆ ಎಂದು ಮೇ.13 ರಂದು ಕಾದು ನೋಡಬೇಕಿದೆ ಎಂದು ಹೇಳಿದರು.‌

ನಿನ್ಬೆ ಮಾಜಿ ಮುಖ್ಯಮಂತ್ರಿ ಸಾರ್ವಜನಿಕ ಸಭೆ ಹಮ್ಮಿಕೊಳ್ಳುವುದರ ಜೊತೆಗೆ ಮುಸ್ಲೀಂ, ಬ್ರಾಹ್ಮಣ ಮತ್ತು ಹಿಂದುಳಿದ ಸಮುದಾಯದ ಜೊತೆ ಮಾತುಕತೆ ನಡೆಸಿದ್ದಾರೆ. ಮುಕ್ತಿಯರ್ ಅಹ್ಮದ್ ಸಾವಿರಾರು ಸಂಖ್ಯೆಯಲ್ಲಿ ಜೆಡಿಎಸ್ ಪಕ್ಷ ಸೇರಿದ್ದಾರೆ ಇದರಿಂದ ಜೆಡಿಎಸ್ ಗೆ ಅನುಕೂಲವಾಗಿದೆ ಎಂದರು.

ನಾನು ರಾಜೀನಾಮೆನೀಡುವಾಗ ಸರ್ಕಾರಿ ನೌಕರರಿಗೆ ಒಪಿಎಸ್, ನಿವೃತ್ತ ನೌಕರರ ಸಮಸ್ಯೆ, ಅತಿಥಿ ಉಪನ್ಯಾಸಕರ ಸಮಸ್ಯೆ, ಪರಿಣಾಮಕಾರಿಯಾಗಿ ಬಗೆಹರಿಸಲಾಗುತ್ತಿಲ್ಲ ಎಂದು ರಾಜೀನಾಮೆ ನೀಡಿದ್ದೇನೆ. ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಎಲ್ಲಾ ಸಮಸ್ಯೆಯನ್ನ ಬಗೆಹರಿಸುವುದಾಗಿ ಕುಮಾರ ಸ್ವಾಮಿ ಹೇಳಿದ್ದಾರೆ. ಹಾಗಾಗಿ ಈ ಬಾರಿ ಶಿವಮೊಗ್ಗದ ಜನ ನನ್ನನ್ನ ಆಯ್ಕೆ ಮಾಡುವಂತೆ ಮನವಿ ಮಾಡಿಕೊಂಡರು.‌

ಜಿಲ್ಲೆಗೆ ಕೈಗಾರಿಕೆ ನೀಡುವುದಾಗಿ ಕುಮಾರ ಸ್ವಾಮಿ ಭರವಸೆ ನೀಡಿದ್ದಾರೆ. 25 ಸಾವಿರ ಕಾರ್ಮಿಕ ನೌಕರರು ನನಗೆ ಬೆಂಬಲ ಸೂಚಿಸಿದ್ದಾರೆ. ರಾಜಕೀಯ ಬದಲಾವಣೆ ಆಗಲಿದೆ. ನಿನ್ನೆಯ ಸಮಾವೇಶ ನನಗೆ ಬಲ ನೀಡಿದೆ. ವಿಧಾನ ಸಭೆಗೆ ಆರಿಸಿಕೊಟ್ಟರೆ ಎಲ್ಲಾ ಬೇಡಿಕೆ ಈಡೇರಿಸಲಿದ್ದೇನೆ ಎಂದರು.

ವೇದಿಕೆ ಮೇಲೆ ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಜಿಲ್ಲೆಯ ಇಬ್ಬರನ್ನ ಮಂತ್ರಿ ಮಾಡುವುದಾಗಿ ಘೋಷಣೆ ಮಾಡಿರುವುದು ಶಾರದಾ ಪೂರ್ಯಾನಾಯ್ಕ್ ಮತ್ತು ನನ್ನನ್ನ ನೋಡಿ ಘೋಷಿಸಿದ್ದಾರೆ ಎಂದು ತಿಳಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು