ಶಿವಮೊಗ್ಗ: ಮಾಜಿ ಸಚಿವ, ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಕ್ಷೇತ್ರದಲ್ಲೇ ರಾಷ್ಟ್ರಲಾಂಛನಕ್ಕೆ ಅಪಮಾನಗೊಸಲಾಗಿದೆ. ಕೆಲ ಮಾಧ್ಯಮಗಳು ಈ ಅಶೋಕ ಲಾಂಚನದ ಮೇಲೆ ಭಗ್ವಧ್ವಜ ಹಾರಿಸಿ ಅಪಮಾನಿಸಲಾಗಿದೆ ಎಂದು ಪ್ರಚಾರ ಮಾಡಿವೆ.
ಶಿವಮೊಗ್ಗದ ಅಶೋಕ ವೃತ್ತದಲ್ಲಿರುವ ರಾಷ್ಟ್ರಲಾಂಛನಕ್ಕೆ ಅಪಮಾನವಾಗಿದೆ.ರಾಷ್ಟ್ರಲಾಂಛನದ ಮೇಲ್ಭಾಗದಲ್ಲಿ ಕೇಸರಿ ಧ್ವಜ ಹಾರಿಸಲಾಗಿದೆ.
ಹಿಂದುಮಹಾಸಭಾ ಗಣಪತಿವಿಸರ್ಜನಾ ಮೆರವಣಿಗೆ ಹಿನ್ನೆಲ್ಲೆಯಲ್ಲಿ ಇಡೀ ಶಿವಮೊಗ್ಗ ಕೇಸರಿಮಯ ಮಾಡಲಾಗಿದ್ದು ಅಲಂಕಾರ ಸಮಿತಿಯು ರಾಷ್ಟಲಾಂಚನದ ಮೇಲೆ ಕೇಸರಿ ಧ್ವಜ ಹಾರಿಸಲಾಗಿದೆ.
ಈ ಹಿಂದೆ ಕೆಂಪುಕೋಟೆ ಮೇಲೆಯೂ ಭಾಗವಧ್ವಜ ಹಾರಿಸುವುದಾಗಿ ಹೇಳಿಕೆ ನೀಡಿದ್ದ ಶಾಸಕ ಹಾಗೂ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಇದೀಗ ಅವರ ಕ್ಷೇತ್ರದಲ್ಲೇ ರಾಷ್ಟ್ರ ಲಾಂಛನದ ಮೇಲೆ ಕೇಸರಿ ಧ್ವಜ ಹಾರಿಸಿ ಅವಮಾನ ಮಾಡಲಾಗಿದೆ.
ನಂತರ ಪೊಲೀಸರು ತೆಗೆಸಿರುವುದಾಗಿ ತಿಳಿದುಬಂದಿದೆ.