ಶಿವಮೊಗ್ಗ: ಸಾಗರದಲ್ಲಿ ನಡೆದಿರುವ ನಿನ್ನೆಯ ಘಟನೆ ವೈಯಕ್ತಿಕವಾದುದ್ದು ಎಂದು ಎಸ್ಪಿ ಮಿಥುನ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಜರಂಗದಳ ಕಾರ್ಯಕರ್ತ ಸುನಿಲ್, ಸಮೀರ್ ಸಹೋದರಿಗೆ ಚುಡಾಯಿಸುತ್ತಿದ್ದ. ಕಳೆದ ನಾಲ್ಕೈದು ತಿಂಗಳಿನಿಂದ ಚುಡಾಯಿಸುತ್ತಿರುತ್ತಾನೆ ಎಂದರು.
ಸುನಿಲ್ ಗೆ ಸಮೀರ್ ಈ ಸಂಬಂಧ ವಾರ್ನ್ ಮಾಡಿರುತ್ತಾನೆ. ಸಮೀರ್ ತಂಗಿಯ ಫೋನ್ ನಂ. ಕೂಡ ಕೇಳಿರುತ್ತಾನೆ. ಹೀಗಾಗಿ ಸಮೀರ್, ಸುನಿಲ್ ವಿರುದ್ಧ ಆಕ್ರೋಶಗೊಂಡಿರುತ್ತಾನೆ. ಎರಡ್ಮೂರು ಬಾರಿ ಸಮೀರ್ ಎಚ್ಚರಿಕೆ ಸಹ ನೀಡಿರುತ್ತಾನೆ ಎಂದರು.
ನಿನ್ನೆ ಕೂಡ ದ್ವಿಚಕ್ರ ವಾಹನದಲ್ಲಿ ಬರುವ ವೇಳೆ ಸುನಿಲ್ ಮತ್ತು ಸಮೀರ್ ಬಯ್ದಾಡಿಕೊಂಡಿದ್ದಾರೆ. ಸಮೀರ್ ಮೇಕೆ ಮೇಯಿಸಲು ಹುಲ್ಲು ತರಲು ಹೊರಟಿರುತ್ತಾನೆ. ಈ ಸಂಬಂಧ ಮಚ್ಚು ಇಟ್ಟುಕೊಂಡಿರುತ್ತಾನೆ. ಇದೇ ಮಚ್ಚಿನಿಂದ ಸುನಿಲ್ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ ಎಂದರು.
ಈ ರೀತಿಯ ವಿಚಾರಗಳಿದ್ದರೆ, ಸಾರ್ವಜನಿಕರು ಪೊಲೀಸರ ಗಮನಕ್ಕೆ ತರಬೇಕು. ಈ ರೀತಿ ಕಾನೂನು ಕೈಗೆತ್ತಿಕೊಳ್ಳಬಾರದು. ಕ್ರಿಕೆಟ್ ಮ್ಯಾಚ್ ಸಂಬಂಧ ಸಮೀರ್, ಇಮಿಯಾನ್, ಮನ್ಸೂರ್ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು. ಕ್ರಿಕೆಟ್ ಮ್ಯಾಚ್ ಮುಗಿಸಿ ಲಾಡ್ಜ್ ನಲ್ಲಿ ಉಳಿದಿರುತ್ತಾರೆ ಎಂದರು.
ಅಲ್ಲಿ ಬರುವ ವ್ಯಕ್ತಿಯ ಜೊತೆ ಸಮೀರ್ ಮಾತನಾಡುತ್ತಾನೆ. ಈ ಸಂಬಂಧ ತನಿಖೆ ನಡೆಯುತ್ತಿದೆ. ಮೂವರನ್ನು ಬಂಧಿಸಲಾಗಿದ್ದು, ಮತ್ಯಾರು ಈ ಪ್ರಕರಣದಲ್ಲಿದಾರೆಂಬುದು ತನಿಖೆ ನಡೆಸಲಾಗುತ್ತಿದೆ. ಕ್ರಿಕೆಟ್ ಮ್ಯಾಚ್ ಬಳಿಕ ಇಮಿಯಾನ್ ಬುಕ್ ಮಾಡಿದ್ದ ರೂಂ ನಲ್ಲಿ ಉಳಿದಿರುತ್ತಾರೆ ಎಂದು ಹೇಳಿದರು.
ಸಮೀರ್ ಸಹೋದರಿಗೆ ಚುಡಾಯಿಸಿರುವ ಕಾಲ್ ರೆಕಾರ್ಡ್ಸ್ ನಮಗೆ ಸಿಕ್ಕಿದೆ. ಪ್ರಕರಣ ಸಂಬಂಧ ತನಿಖೆ ನಡೆಸಲಾಗುತ್ತಿದೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಸಾಗರ ಬಂದ್ ಹಿನ್ನೆಲೆಯಲ್ಲಿ ಬಿಗಿ ಕ್ರಮ ಸೂಕ್ತ ಬಂದೋಬಸ್ತ್ ಮಾಡಲಾಗಿದೆ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ.