ಶಿವಮೊಗ್ಗ: ಜಿಲ್ಲೆಯಲ್ಲಿ ಭಾನುವಾರ ಒಂದೇ ದಿನ ಎರಡು ಕೊಲೆ ದಾಖಲಾಗಿದೆ. ಒಂದು ಆಗುಂಬೆಯಲ್ಲಿ ಮಹಿಳೆಯೋರ್ವಳ ಕೊಲೆ ಪ್ರಕರಣ ದಾಖಲಾದರೆ ಆನವಟ್ಟಿಯಲ್ಲಿ ಯುವಕನ ಕೊಲೆ ದಾಖಲಾಗಿದೆ.
ಆನವಟ್ಟಿ ಹೋಬಳಿಯ ತಡುನೀರು ಗ್ರಾಮದಲ್ಲಿ ಸಲೀಂ ಎಂಬ 26 ವರ್ಷದ ಯುವಕನಶವ ಪತ್ತೆಯಾಗಿದೆ. ಜಮೀನಿನ ಹೊರಭಾಗದಲ್ಲಿ ಕೊಲೆ ಮಾಡಿ ಆತನ ಜಮೀನಿನ ಬಳಿ ಬಿಸಾಕಿ ಹೋಗಲಾಗಿದೆ. ಗುರುವಾರವೇ ತನ್ನ ಜಮೀನಿಗೆ ತೆರಳಿದ್ದ ಯುವಕ ಇಂದು ಶವವಾಗಿ ಪತ್ತೆಯಾಗಿದ್ದಾನೆ.
ಗುರುವಾರವೇ ತಮ್ಮ ಜಮೀನಿಗೆ ತೆರಳಿದ್ದ ಸಲೀಂ ಬೆಳೆ ಕಾಯಲು ತೆರಳಿದ್ದ ಎನ್ನಲಾಗಿದೆ. ಮೂರು ದಿನವಾದರೂ ಮನೆಗೆ ಬಾರದ ಹಿನ್ನಲೆಯಲ್ಲಿ ಹಾಗೂ ಮೊಬೈಲ್ ಸ್ವಿಚ್ ಆಫ್ ಆದ ಪರಿಣಾಮ ಆತನ ಪೋಷಕರು ಜಮೀನಿಗೆ ಹುಡಕಲು ತೆರಳಿದ್ದಾರೆ. ಆಗ ಆತನ ಮೃತದೇಹ ಪತ್ತೆಯಾಗಿದೆ.
ಸಲೀಂ ತಲೆಗೆ ಹರಿತವಾದ ಆಯುಧಗಳಿಂದ ಕೊಲೆ ಮಾಡಿ ಸಾಯಿಸಲಾಗಿದೆ. ಸಲೀಂ ಕಬ್ಬಡ್ಡಿ ಮತ್ತು ಹೋರಿ ಹಿಡಿಯುವುದರಲ್ಲಿ ಪ್ರವೀಣನಾಗಿದ್ದನು.ಮನೆಬಿಟ್ಟು ವಾರಾನುಗಟ್ಟಲೆ ಹೊರಗೆ ಇರುತ್ತಿದ್ದು. ಮೊನ್ನೆಯಿಂದ ಆತನ ಮೊಬೈಲ್ ಸ್ವಿಚ್ ಆಫ್ಬಂದ ಕಾರಣ ಆತನ ಕುಟುಂಬ ಹುಡುಕಿಕೊಂಡು ಬಂದಿದೆ. ಆನವಟ್ಟಿ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
ಆಗುಂಬೆಯಲ್ಲಿ ಕೃಷಿ ಕಾರ್ಮಿಕ ಮಹಿಳೆ ಶವವಾಗಿ ಪತ್ತೆ
ಆಗುಂಬೆ ಹೊನ್ನೇತಾಳು ಗ್ರಾಮದಲ್ಲಿ ಜಮೀನ್ದಾರ್ ಸಾವಿತ್ರಮ್ಮ ಎಂಬುವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆ ಶವವಾಗಿ ಪತ್ತೆಯಾಗಿದ್ದಳೆ. ಚಿತ್ರದುರ್ಗದಿಂದ ಜಮೀನ್ದಾರ್ ತೋಟಕ್ಕೆ ಕೆಲಸಕ್ಕೆ ಬಂದಿದ್ದ ಪಾರ್ವತಮ್ಮ ಎಂಬುವರು ಶವವಾಗಿ ಪತ್ತೆಯಾಗಿದ್ದಾರೆ. ಇದನ್ನ ಕೊಲೆ ಎಂದು ಬಣ್ಣಿಸಲಾಗುತ್ತಿದೆ. ಈ ಸಂಬಂಧ ಓರ್ವನನ್ನಆಗುಂಬೆ ಪೊಲೀಸರು ಬಂಧಿಸಿದ್ದಾರೆ.