News Karnataka Kannada
Thursday, May 09 2024
ಶಿವಮೊಗ್ಗ

ಶಿವಮೊಗ್ಗ: ಪೌರಕಾರ್ಮಿಕನನ್ನ ಸುಲಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರ ಬಂಧನ

Dodda
Photo Credit : By Author

ಶಿವಮೊಗ್ಗ: ಪೌರಕಾರ್ಮಿಕನನ್ನ ಸುಲಿಗೆ ಮಾಡಿದ ಪ್ರಕರಣವನ್ನ ಬೆನ್ನು ಹತ್ತಿದ‌ ದೊಡ್ಡ ಪೇಟೆ ಪೊಲೀಸರು ಬಚ್ಚಾ ಫೈಜಲ್ ಮತ್ತು ಅಲ್ತಾಫ್ ಯಾನೆ ಕುಯ್ಯನನ್ನ ಬಂಧಿಸಲಾಗಿದೆ. ಘಟನೆ ನಡೆದು 24 ಗಂಟೆಯಲ್ಲಿ ಪ್ರಕರಣವನ್ನ ಬೇಧಿಸಿ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.

ಮನೆಯ ಮುಂದೆ ನಿಲ್ಲಿಸಿದ್ದ ಪೌರ ಕಾರ್ಮಿಕನ ದ್ವಿಚಕ್ರವಾಹನದ ಸೀಟನ್ನ ತೆಗೆದು ಡಿಕ್ಕಿಯಲ್ಲಿದ್ದ ವಸ್ತುಗಳನ್ನ ಕದಿಯಲು ಯತ್ನಿಸಿದ್ದ ಬಚ್ಚಾ ಫೈಜಲ್ ಮತ್ತು ಅಲ್ತಾಫ್ ಯಾನೆ ಕುಯ್ಯನ ವಿರುದ್ಧ ಎಫ್ಐಆರ್ ದಾಖಲಾಗಿತ್ತು.

ಅಲ್ತಾಫ್ ಯಾನೆ ಕುಯ್ಯ ಮತ್ತು ಬಚ್ಚಾ ಫಾಜಿಲ್ ಇಬ್ಬರೂ ಟೆಂಪೋ ಸ್ಟ್ಯಾಂಡ್ ಬಳಿ ಇದ್ದ ಪೌರಕಾರ್ಮಿಕ ತೇಜಸ್ ಎಂಬುವರ ಮನೆಯ ಮುಂದೆ ನಿಲ್ಲಿಸಿದ್ದ ಆಕ್ಟಿವ್ ಹೋಂಡಾದ ಬೈಕ್ ನ ಸೀಟು ಕಿತ್ತು ತಪಾಸಣೆ ಮಾಡುತ್ತಿದ್ದದ್ದನ್ನ ಗಮನಿಸಿದ್ದಾರೆ.

ಅದೇ ವೇಳೆ ತೇಜಸ್ ನೀರುಗಂಟಿ ಕೆಲಸ ಮಾಡುತ್ತಿದ್ದು, ಬೆಳಿಗ್ಗೆನೇ ಬಡಾವಣೆಗಳಿಗೆ ನೀರು ಬಿಡಲು ಎದ್ದು ಕರ್ತವ್ಯಕ್ಕೆ ಹೋಗುವಾಗ ಇಬ್ಬರನ್ನ ನೋಡಿ ಯಾಕೆ ಸೀಟು ತೆಗೆದಿದ್ದೀರ ಎಂದು ಪ್ರಶ್ನಿಸಿದ್ದಾರೆ. ಫೈಜಲ್ ಮತ್ತು ಕುಯ್ಯ ಇಬ್ವರು ಆತನನ್ನ ಕೈಗಳಿಂದ ಹೊಡೆದಿದ್ದಾರೆ. ಇದನ್ನ ನೋಡಿದ ತೇಜಸ್ ತಂದೆ ತಾಯಿ ಬಂದು ಜಗಳ ಬಿಡಿಸಿದ್ದಾರೆ.

ಹೋಗುವ ವೇಳೆ ತೇಜಸ್ ನ 7 ಸಾವಿರ ರೂ ಮೌಲ್ಯದ ವೀವೋ ಮೊಬೈಲ್ ಕದ್ದು ಹೋದ ಪ್ರಕರಣವೊಂದು ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನ ದಾಖಲಿಸಿಕೊಂಡ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ಕುಯ್ಯನ ವಿರುದ್ಧ ಗಾಂಜಾ ಪ್ರಕರಣ ದಾಖಲಾಗಿವೆ. ಬ್ಬಚ್ಚಾ ಫೈಜಲ್ ಸಹ ಈತನ ವಿರುದ್ಧ ದೂರುಗಳಿವೆ ಎಂದು ತಿಳಿದು ಬಂದಿದೆ. ಇಬ್ಬರಿಗೂ ಜೆಸಿಯಾಗಿದೆ

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು