News Karnataka Kannada
Saturday, May 04 2024
ಶಿವಮೊಗ್ಗ

ಶಿವಮೊಗ್ಗ: ಅಂಧ ಯುವಕನ ಮೇಲೆ ಹರಿದ ರೈಲು

Shimoga: Train runs over blind man
Photo Credit : By Author

ಶಿವಮೊಗ್ಗ: ರೈಲು ಹಳಿ ದಾಟುವಾಗ ಅಂಧ ಯುವಕನೋರ್ವ ರೈಲಿಗೆ ಸಿಲುಕಿ ಸಾವನ್ನಪ್ಪಿರುವ ಘಟನೆ ನಿನ್ನೆ ನಡೆದಿದೆ.

ನಿನ್ನೆ ಮಧ್ಯಾಹ್ನ 1 ಗಂಟೆಯ ಶಿವಮೊಗ್ಗ-ಬೆಂಗಳೂರು ಡೆಮೋ ರೈಲು ಮಧ್ಯಾಹ್ನ 1-30 ಕ್ಕೆ ಭದ್ರಾವತಿಯ ಹುತ್ತಾ ಕಾಲೋನಿಯ ಬಳಿ ಚಲಿಸುವಾಗ ಹಳಿ ದಾಟುತ್ತಿದ್ದ 34 ವರ್ಷದ ಯುವಕನ ಮೇಲೆ ಹರಿದು ಹೋಗಿದೆ.

ರೈಲಿಗೆ ಸಿಲುಕಿ ಸಾವನ್ನಪ್ಪಿದ ಯುವಕನನ್ನ ಮಹೇಶ್ ಎಂದು ಗುರುತಿಸಲಾಗಿದೆ. ಮಹೇಶ್ ಗೆ ಕಣ್ಣು ಕಾಣಿಸುತ್ತಿರಲಿಲ್ಲ. ಕಿವಿ ಸಹ ಮಂದವಾಗಿತ್ತು ಎಂದು ಹೇಳಲಾಗುತ್ತಿದೆ. ಈತ ಉಜ್ಜೈನಿಪುರದ 8 ನೇ ತಿರುವಿನ ನಿವಾಸಿಯಾಗಿದ್ದಾನೆ. ಈತ ಯಾಕೆ ಇಲ್ಲಿಗೆ ಬಂದಿದ್ದ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ರೈಲು ಬರುವುದು ಕಾಣಿಸದೆ, ಶಬ್ದವೂ ಕೇಳಿಸದೆ ಇದ್ದುದ್ದರಿಂದ ಮಹೇಶ್ ದುರಂತ ಸಾವಿಗೆ ಸಾಕ್ಷಿಯಾಗಿದ್ದಾನೆ. ಆತ ಯಾರ ಸಹಾಯವಿಲ್ಲದೆ ಯಾಕೆ ಬಂದ ಎಂಬುದು ತಿಳಿದುಬಂದಿಲ್ಲ. ಆತನ ಕುಟುಂಬಕ್ಕೆ ಮೃತ ದೇಹವನ್ನ ಹಸ್ತಾಂತರಿಸಲಾಗಿದೆ. ರೈಲ್ವೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು