ಶಿವಮೊಗ್ಗ: ಬ್ರಾಹ್ಮಣ ಸಮಾಜಕ್ಕೆ ಮೊದಲ ಬಾರಿಗೆ ಸಿಎಂ ಆದ ಕುಮಾರ ಸ್ವಾಮಿ ನಿವೇಶನ ನೀಡಿದ್ದರು. ಎರಡನೇ ಬಾರಿ ಸಿಎಂ ಆದಾಗ ಬ್ರಾಹ್ಮಣ ಅಭಿವೃದ್ದಿ ಸಮುದಾಯದ ರಚನೆ ಮಾಡುವುದಾಗಿ ಕುಮಾರ ಸ್ವಾಮಿ ನಿನ್ನೆ ಭರವಸೆ ನೀಡಿದ್ದಾರೆ ಎಂದು ಮಾಜಿ ಶಾಸಕ ಕೆ.ಬಿ.ಪ್ರಸನ್ನ ಕುಮಾರ್ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಐದು ವರ್ಷಗಳಲ್ಲಿ ಬಿಜೆಪಿ ನಾಯಕರು, ಈಗಿನ ಮುಖ್ಯ ಮಂತ್ರಿಗಳು ಅಭಿವೃದ್ಧಿ ನಿಗಮ ಕಡೆಗಣಿಸಿ ಬಿಡಿಗಾಸನ್ನೂ ಕೊಡಲಿಲ್ಲ. ಖಾಲಿ ಕಚೇರಿ ಇಟ್ಟಿದ್ದರು. ನಿನ್ನೆ ಕುಮಾರ ಸ್ವಾಮಿ ನಿಗಮಕ್ಕೆ 100 ಕೋಟಿ ಅನುದಾನ ನೀಡುವ ಘೋಷಣೆ ಮಾಡಿರುವುದು ಸಂತೋಷ ತಂದಿದೆ ಎಂದರು.
ಆಚಾರ್ಯತ್ರಯರ ಭವನವನ್ನ ಶಿವಮೊಗ್ಗದಲ್ಲಿ ಮಾಡಲಾಗಿದೆ.ಅದೇ ರೀತಿ ಎಲ್ಲಾ ಜಿಲ್ಲಾ ಭವನದಲ್ಲಿ ಆಚಾರ್ಯತ್ರಯರ ಭವನವನ್ನ ನಿರ್ಮಿಸಲು ಸಿಧ್ದನಿದ್ದೇನೆ ಎಂದಿದ್ದಾರೆ.
ಹಾಗಾಗಿ ಆಯನೂರು ಮಂಜುನಾಥ್ ಅವರನ್ನು ಗೆಲ್ಲಿಸಬೇಕಿದೆ. ಅವರನ್ನ ಗೆಲ್ಲಿಸಿದಲ್ಲಿ ಮಂತ್ರಿಯಾಗಿರುತ್ತಾರೆ ಎಂದು ಕುಮಾರ ಸ್ವಾಮಿ ವೇದಿಕೆ ಮೇಲೆ ಘೋಷಿಸಿದ್ದು ನೆಮ್ಮದಿಯ ನಗರವನ್ನಾಗಿ ನಿರ್ಮಿಸಲು ಮತ್ತು, ಪರ್ಸೆಂಟೇಜ್ ಇಲ್ಲದ ಅಭಿವೃದ್ಧಿಗಾಗಿ ಶಾಸಕರನ್ನಾಗಿ ಮಾಡುವಂತೆ ಕೋರಿದರು.