ಶಿವಮೊಗ್ಗ: ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಶಾಂತಿಗೆ ಭಂಗತರುವಂತಹ ಕೃತ್ಯಗಳನ್ನೆಸಗಿ, ಸಾರ್ವಜನಿಕವಾಗಿ ಗೂಂಡಾವರ್ತನೆಯನ್ನು ಪ್ರದರ್ಶಸುತ್ತಾ, ಸಾರ್ವಜನಿಕರಲ್ಲಿ ಭಯವನ್ನುಟ್ಟಿಸುವ 45 ಜನರ ಗಡಿಪಾರಿಗೆ ಪೊಲೀಸ್ ಇಲಾಖೆ ಪಟ್ಟಿ ಸಿದ್ದಪಡಿಸಿದೆ.
45 ಜನ ಎಂಒಬಿ, ರೌಡಿ ಹಾಗೂ ರೂಢಿಗತ ಅಪರಾಧಿಗಳ ಗಡಿಪಾರಿಗೆ ಖಾಕಿಪಡೆ ಪ್ರಸ್ತಾವನೆ ಸಲ್ಲಿಸಿದೆ. ಪ್ರಸ್ತಾವನೆ ಆಯಾ ಉಪವಿಭಾಗಾಧಿಕಾರಿಗಳ ಅಂಗಳದಲ್ಲಿದೆ.
ರೌಡಿ ಮತ್ತು ಎಂಓಬಿ ಆಸಾಮಿಗಳು ಹಾಗೂ ರೂಢಿಗತ ಅಪರಾಧಿಗಳ ವಿರುದ್ಧ ದಿನಾಂಕಃ- 01-01-2022 ರಿಂದ ಇಲ್ಲಿಯ ವರೆಗೆ ಶಿವಮೊಗ್ಗ ಉಪ ವಿಭಾಗದಿಂದ 31 ಜನ, ಭದ್ರಾವತಿ ಉಪ ವಿಭಾಗದಿಂದ 02 ಜನ, ಸಾಗರ ಉಪ ವಿಭಾಗದಿಂದ 02 ಜನ, ಶಿಕಾರಿಪುರ ಉಪ ವಿಭಾಗದಿಂದ 05 ಜನ ಮತ್ತು ತೀರ್ಥಹಳ್ಳಿ ಉಪ ವಿಭಾಗದಿಂದ 05 ಜನರು ಸೇರಿ ಒಟ್ಟು 45 ಜನರನ್ನು ಗಡಿಪಾರು ಮಾಡಲು ಆಯಾ ಉಪ ವಿಭಾಗಾಧಿಕಾರಿಗಳಿಗೆ ಪ್ರಸ್ಥಾವನೆಯನ್ನು ಸಲ್ಲಿಸಲಾಗಿದೆ.
ಈಗಾಗಲೇ 03 ಜನರನ್ನು ಗಡಿಪಾರು ಆದೇಶ ಹೊರಬಿದ್ದಿದೆ. ಮೇಲ್ಕಂಡ 45 ಜನರ ಗಡಿಪಾರು ಪ್ರಸ್ಥಾವನೆಯಲ್ಲಿ, ಕಳೆದ ಎರಡು ತಿಂಗಳಲ್ಲಿ ಶಿವಮೊಗ್ಗ ಉಪ ವಿಭಾಗದಿಂದ 15 ಜನ, ಭದ್ರಾವತಿ ಉಪ ವಿಭಾಗದಿಂದ ಒಬ್ವರು, ಸಾಗರ ಉಪ ವಿಭಾಗದಿಂದ ಇಬ್ಬರು ಮತ್ತು ಶಿಕಾರಿಪುರ ಉಪ ವಿಭಾಗದಿಂದ ನಾಲ್ವರು ಸೇರಿದಂತೆ ಒಟ್ಟು 22 ಜನರನ್ನು ಗಡಿಪಾರು ಮಾಡಲು ಆಯಾ ಉಪ ವಿಭಾಗಾಧಿಕಾರಿಗಳಿಗೆ ಪ್ರಸ್ಥಾವನೆಯನ್ನು ಸಲ್ಲಿಸಲಾಗಿರುತ್ತದೆ.