News Karnataka Kannada
Tuesday, April 30 2024
ಶಿವಮೊಗ್ಗ

ಶಿವಮೊಗ್ಗ: ರೌಡಿ ಹಾಗೂ ರೂಢಿಗತ ಅಪರಾಧಿಗಳ ಗಡಿಪಾರಿಗೆ ಪ್ರಸ್ತಾವನೆ ಸಲ್ಲಿಸಿದ ಖಾಕಿಪಡೆ

Honour killing case: Local inspector suspended for negligence
Photo Credit : Pexels

ಶಿವಮೊಗ್ಗ: ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕರ ಶಾಂತಿಗೆ ಭಂಗತರುವಂತಹ ಕೃತ್ಯಗಳನ್ನೆಸಗಿ, ಸಾರ್ವಜನಿಕವಾಗಿ ಗೂಂಡಾವರ್ತನೆಯನ್ನು ಪ್ರದರ್ಶಸುತ್ತಾ, ಸಾರ್ವಜನಿಕರಲ್ಲಿ ಭಯವನ್ನುಟ್ಟಿಸುವ 45 ಜನರ ಗಡಿಪಾರಿಗೆ ಪೊಲೀಸ್ ಇಲಾಖೆ ಪಟ್ಟಿ ಸಿದ್ದಪಡಿಸಿದೆ.

45 ಜನ ಎಂಒಬಿ, ರೌಡಿ ಹಾಗೂ ರೂಢಿಗತ ಅಪರಾಧಿಗಳ ಗಡಿಪಾರಿಗೆ ಖಾಕಿಪಡೆ ಪ್ರಸ್ತಾವನೆ ಸಲ್ಲಿಸಿದೆ. ಪ್ರಸ್ತಾವನೆ ಆಯಾ ಉಪವಿಭಾಗಾಧಿಕಾರಿಗಳ ಅಂಗಳದಲ್ಲಿದೆ.

ರೌಡಿ ಮತ್ತು ಎಂಓಬಿ ಆಸಾಮಿಗಳು ಹಾಗೂ ರೂಢಿಗತ ಅಪರಾಧಿಗಳ ವಿರುದ್ಧ ದಿನಾಂಕಃ- 01-01-2022 ರಿಂದ ಇಲ್ಲಿಯ ವರೆಗೆ ಶಿವಮೊಗ್ಗ ಉಪ ವಿಭಾಗದಿಂದ 31 ಜನ, ಭದ್ರಾವತಿ ಉಪ ವಿಭಾಗದಿಂದ 02 ಜನ, ಸಾಗರ ಉಪ ವಿಭಾಗದಿಂದ 02 ಜನ, ಶಿಕಾರಿಪುರ ಉಪ ವಿಭಾಗದಿಂದ 05 ಜನ ಮತ್ತು ತೀರ್ಥಹಳ್ಳಿ ಉಪ ವಿಭಾಗದಿಂದ 05 ಜನರು ಸೇರಿ ಒಟ್ಟು 45 ಜನರನ್ನು ಗಡಿಪಾರು ಮಾಡಲು ಆಯಾ ಉಪ ವಿಭಾಗಾಧಿಕಾರಿಗಳಿಗೆ ಪ್ರಸ್ಥಾವನೆಯನ್ನು ಸಲ್ಲಿಸಲಾಗಿದೆ.

ಈಗಾಗಲೇ 03 ಜನರನ್ನು ಗಡಿಪಾರು ಆದೇಶ ಹೊರಬಿದ್ದಿದೆ. ಮೇಲ್ಕಂಡ 45 ಜನರ ಗಡಿಪಾರು ಪ್ರಸ್ಥಾವನೆಯಲ್ಲಿ, ಕಳೆದ ಎರಡು ತಿಂಗಳಲ್ಲಿ ಶಿವಮೊಗ್ಗ ಉಪ ವಿಭಾಗದಿಂದ 15 ಜನ, ಭದ್ರಾವತಿ ಉಪ ವಿಭಾಗದಿಂದ ಒಬ್ವರು, ಸಾಗರ ಉಪ ವಿಭಾಗದಿಂದ ಇಬ್ಬರು ಮತ್ತು ಶಿಕಾರಿಪುರ ಉಪ ವಿಭಾಗದಿಂದ ನಾಲ್ವರು ಸೇರಿದಂತೆ ಒಟ್ಟು 22 ಜನರನ್ನು ಗಡಿಪಾರು ಮಾಡಲು ಆಯಾ ಉಪ ವಿಭಾಗಾಧಿಕಾರಿಗಳಿಗೆ ಪ್ರಸ್ಥಾವನೆಯನ್ನು ಸಲ್ಲಿಸಲಾಗಿರುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು