ಶಿವಮೊಗ್ಗ: ಆ.15 ರ ಸ್ವಾತಂತ್ರ್ಯೋತ್ಸವವನ್ನ ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸಬೇಕಿತ್ತು. ಆದರೆ ಮಧ್ಯಾಹ್ನದ ನಂತರದ ಬೆಳವಣಿಗೆಗಳು, ಜನಸಾಮಾನ್ಯರಿಗೆ, ವ್ಯಾಪಾರಸ್ಥರಿಗೆ ತೊಂದರೆಗಳು ಆಗುತ್ತಿದ್ದು, ಇದನ್ನ ಪೊಲೀಸ್ ಇಲಾಖೆ ಸರಿಪಡಿಸುವಂತೆ ಕೆಪಿಸಿಸಿ ವಕ್ತಾರ ಕೆ.ಬಿ.ಪ್ರಸನ್ನಕುಮಾರ್ ಒತ್ತಾಯಿಸಿದ್ದಾರೆ.
ಅವರು ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ವ್ಯಾಪಾರವನ್ನ ಬಂದ್ ಮಾಡಿಸಿರುವುದು ಸರಿಯಲ್ಲ. ಈ ಗಲಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಪೊಲೀಸರ ಕಣ್ಣಿಗೆ ಬೀಳ್ತಾ ಇಲ್ಲ. ಪೊಲೀಸ್ ವ್ಯವಸ್ಥೆಯ ಮೇಲೆ ಕಾನೂನು ಜವಬ್ದಾರಿ ಇದೆ. ಪೊಲೀಸರ ವರ್ತನೆಯಲ್ಲಿ ತಾರತಮ್ಯ ಕಾಣುತ್ತಿದೆ. ಬಿಜೆಪಿ ಕಾರ್ಯಕರ್ತರನ್ನ ಪ್ರಶ್ನಿಸುವ ಶಕ್ತಿ ಇಲಾಖೆ ಕಳೆದುಕೊಂಡಿದೆ ಎಂದು ಆರೋಪಿಸಿದ್ದಾರೆ.
ದುರ್ಗಿಗುಡಿಯಲ್ಲಿ ಎಎಸ್ಐ ವಿರುದ್ಧ ಬಿಜೆಪಿ ಕಾರ್ಯಕರ್ತರು ಹೊಡೆಯುವ ಮಟ್ಟಿಗೆ ಹೋಗಿದ್ದಾರೆ. ಆದರೆ ಅವರನ್ನ ಪ್ರಶ್ನಿಸುವುದಿಲ್ಲವೆಂದರೆ ಅವರ ವಿರುದ್ಧ ಎಫ್ಐಆರ್ ಹಾಕಲಿಲ್ಲವೆಂದರೆ ಇದು ತಾರತಮ್ಯವಲ್ಲವೇ ಎಂದು ಪ್ರಶ್ನಿಸಿದರು.
ಕೈಗಾರಿಕೆ ನಡೆಸಲು ಮತ್ತು ವ್ಯಾಪಾರ ನಡೆಸಲು ಸೆಕ್ಷನ್ 144 ಜಾರಿಗೊಳಿಸಿದರೂ ಬಂದ್ ಮಾಡಲಾಗಿದೆ. ಆದರೆ ಸೆಕ್ಷನ್ 144 ನ್ನೇ ತಿರುಚಿ ಕರ್ಫೂ ರೀತಿ ಜಾರಿಗೊಳಿಸಲಾಗಿದೆ. ಹೋಟೆಲ್ ಉದ್ದಿಮೆ, ಬೀದಿ ಬದಿ ವ್ಯಾಪಾರಸ್ಥರಿಗೆ, ಕೈಗಾರಿಕೆಗಳ ವ್ಯವಹಾರಕ್ಕೆ ಹೊಡೆತ ಬಿದ್ದಿದೆ. ಜನ ನೋಡ್ತಾ ಇದ್ದಾರೆ. ಜನರ ವಿಶ್ವಾಸ ಕಳೆದುಕೊಳ್ಳದಂತೆ ಪೊಲೀಸ್ಇಲಾಖೆಗೆ ಕಿವಿ ಮಾತು ಹೇಳಿದರು.
ಯಾವುದೇ ರಾಜಕೀಯಕ್ಕೆ ಒಳಗಾಗದೇ ಕಾಳಜಿ ಅರಿತು. ಜನರ ಬದುಕಿಗೆ ಪೊಲೀಸ್ ಇಲಾಖೆಯವರು ಸಹಕರಿಸಬೇಕಿತ್ತು. ಆದರೆ ಅದು ಆಗಿಲ್ಲ. ದುರ್ಗಿಗುಡಿಯಲ್ಲಿ ಎಎಸ್ಐ ಮೇಲೆ ದಾಳಿ ನಡೆಸಿದರೂ ಎಫ್ಐಆರ್ ಆಗಿಲ್ಲ. ಅಂದರೆ ಪೊಲೀಸ್ ಇಲಾಖೆ ರಾಜಕೀಯ ವ್ಯಕ್ತಿಗಳಿಗೆ ಮಣೆಹಾಕುತ್ತಿರುವುದಾಗಿ ಕಂಡು ಬಂದಿದೆ.
ಘಟನೆಗಳ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು. ಬಿಜೆಪಿಯ ನಡೆತೆಯಿಂದ ವ್ಯಾಪಾರಸ್ಥರಿಗೆ, ಉದ್ದಿಮೆಗಳಿಗೆ ತೊಂದರೆ ಆಗಿದೆ. ಈ ಘಟನೆಗಳು ಮುಂದುವರೆದರೆ ಜನಸಾಮಾನ್ಯರು ಗಣಪತಿ ಹಬ್ಬವನ್ನ ಹೇಗೆ ಮಾಡಬೇಕು ಎಂಬುದು ಪ್ರಶ್ನೆಯಾಗಿಯೇ ಕಾಣಲಿದೆ ಎಂದರು.