ಶಿವಮೊಗ್ಗ: ದಿನಾಂಕ: 04-12-2022 ರಂದು ಬೆಳಗಿನ ಜಾವ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಶಿರವಂತೆ ಗ್ರಾಮದ ಬಳಿ ಹೊಸನಗರ ಕಡೆಯಿಂದ ಕುಮಟಕ್ಕೆ ಹೋಗುತ್ತಿದ್ದ ಮಾರುತಿ ಓಮ್ನಿ ವಾಹನವು ಅಪಘಾತ ವಾಗಿರುವ ಬಗ್ಗೆ ಇ ಆರ್ ಎಸ್ ಎಸ್ -112 ಸಹಾಯವಾಣಿಗೆ ಕರೆ ಬಂದ ಮೇರೆಗೆ ಇ ಆರ್ ವಿ ವಾಹನದ ಕರ್ತವ್ಯದಲ್ಲಿದ್ದ ಸಾಗರ ಗ್ರಾಮಂತರ ಪೊಲೀಸ್ ಠಾಣೆಯ ಸಿಬ್ಬಂದಿ ಹುಚ್ಚಪ್ಪ ಎಂ ಬಿ, ಹೆಚ್ ಸಿ ಮತ್ತು ಚಾಲಕರಾದ ಸಂದೀಪ್ ,ಎ.ಹೆಚ್.ಸಿ, ಡಿಎಆರ್ ಶಿವಮೊಗ್ಗರವರು ಕೂಡಲೇ ಸ್ಥಳಕ್ಕೆ ಧಾವಿಸಿ, ಪರಿಶೀಲಿಸಲಾಗಿ ಓಮ್ನಿವಾಹನದ ಚಾಲಕನು ವಾಹನದಲ್ಲಿ ಸಿಲುಕಿಕೊಂಡಿದ್ದು, ಹೊರ ಬರಲು ಸಾಧ್ಯವಾಗದೇ ಇದ್ದುದರಿಂದ ಇ ಆರ್ ವಿ ಅಧಿಕಾರಿಗಳು ಕೂಡಲೇ ಸಾಗರ ಟೌನ್ ಗೆ ತೆರಳಿ, ಕಾರ್ ಮೆಕಾನಿಕ್ ಅನ್ನು ಕರೆದುಕೊಂಡು ಬಂದು, ಸ್ಥಳೀಯರೊಂದಿಗೆ ಸೇರಿ ಒಟ್ಟು ಮೂರು ಗಂಟೆಗಳ ಕಾಲ ಯಶಸ್ವಿ ಪ್ರಯತ್ನದೊಂದಿಗೆ ಕಾರ್ ನಲ್ಲಿ ಸಿಲುಕಿದ್ದ ಚಾಲಕ ಪ್ರವೀಣ್ ರವರನ್ನು ಓಮ್ನಿಯಿಂದ ಹೊರ ತೆಗೆದು ರಕ್ಷಿಸಿ, ಗಾಯಗೊಂಡಿದ್ದ ಪ್ರವೀಣ್ ರವರನ್ನು ಚಿಕಿತ್ಸೆ ಸಂಬಂಧ ಕೂಡಲೇ ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ.
ಇ ಆರ್ ವಿ ವಾಹನದ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳ ಸಮಯ ಪ್ರಜ್ಞೆ ಮತ್ತು ಉತ್ತಮ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆರವರು ಪ್ರಶಂಸಿರುತ್ತಾರೆ.