News Karnataka Kannada
Wednesday, May 08 2024
ಶಿವಮೊಗ್ಗ

ಶಿವಮೊಗ್ಗ: ವಾಹನ ಅಪಘಾತ, ಇ ಆರ್ ವಿ ವಾಹನದ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಚಾಲಕ ಪಾರು

Driver escapes unhurt due to punctuality of ERV vehicle staff in vehicle accident
Photo Credit : By Author

ಶಿವಮೊಗ್ಗ: ದಿನಾಂಕ: 04-12-2022 ರಂದು ಬೆಳಗಿನ ಜಾವ ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಶಿರವಂತೆ ಗ್ರಾಮದ ಬಳಿ ಹೊಸನಗರ ಕಡೆಯಿಂದ ಕುಮಟಕ್ಕೆ ಹೋಗುತ್ತಿದ್ದ ಮಾರುತಿ ಓಮ್ನಿ ವಾಹನವು ಅಪಘಾತ ವಾಗಿರುವ ಬಗ್ಗೆ ಇ ಆರ್ ಎಸ್ ಎಸ್ -112 ಸಹಾಯವಾಣಿಗೆ ಕರೆ ಬಂದ ಮೇರೆಗೆ ಇ ಆರ್ ವಿ ವಾಹನದ ಕರ್ತವ್ಯದಲ್ಲಿದ್ದ ಸಾಗರ ಗ್ರಾಮಂತರ ಪೊಲೀಸ್ ಠಾಣೆಯ ಸಿಬ್ಬಂದಿ  ಹುಚ್ಚಪ್ಪ ಎಂ ಬಿ, ಹೆಚ್ ಸಿ ಮತ್ತು ಚಾಲಕರಾದ  ಸಂದೀಪ್ ,ಎ.ಹೆಚ್.ಸಿ, ಡಿಎಆರ್ ಶಿವಮೊಗ್ಗರವರು ಕೂಡಲೇ ಸ್ಥಳಕ್ಕೆ ಧಾವಿಸಿ, ಪರಿಶೀಲಿಸಲಾಗಿ ಓಮ್ನಿವಾಹನದ ಚಾಲಕನು ವಾಹನದಲ್ಲಿ ಸಿಲುಕಿಕೊಂಡಿದ್ದು, ಹೊರ ಬರಲು ಸಾಧ್ಯವಾಗದೇ ಇದ್ದುದರಿಂದ ಇ ಆರ್ ವಿ ಅಧಿಕಾರಿಗಳು ಕೂಡಲೇ ಸಾಗರ ಟೌನ್ ಗೆ ತೆರಳಿ, ಕಾರ್ ಮೆಕಾನಿಕ್ ಅನ್ನು ಕರೆದುಕೊಂಡು ಬಂದು, ಸ್ಥಳೀಯರೊಂದಿಗೆ ಸೇರಿ ಒಟ್ಟು ಮೂರು ಗಂಟೆಗಳ ಕಾಲ ಯಶಸ್ವಿ ಪ್ರಯತ್ನದೊಂದಿಗೆ ಕಾರ್ ನಲ್ಲಿ ಸಿಲುಕಿದ್ದ ಚಾಲಕ ಪ್ರವೀಣ್ ರವರನ್ನು ಓಮ್ನಿಯಿಂದ ಹೊರ ತೆಗೆದು ರಕ್ಷಿಸಿ, ಗಾಯಗೊಂಡಿದ್ದ ಪ್ರವೀಣ್ ರವರನ್ನು ಚಿಕಿತ್ಸೆ ಸಂಬಂಧ ಕೂಡಲೇ ಸಾಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ.

ಇ ಆರ್ ವಿ ವಾಹನದ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳ ಸಮಯ ಪ್ರಜ್ಞೆ ಮತ್ತು ಉತ್ತಮ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆರವರು ಪ್ರಶಂಸಿರುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು