News Karnataka Kannada
Sunday, May 12 2024
ಶಿವಮೊಗ್ಗ

ಸಾಗರ: ಪಟ್ಟಣ ಪಂಚಾಯತಿ ಸದಸ್ಯ ಲೋಕಾಯುಕ್ತ ಬಲೆಗೆ

Sagar: Town panchayat member trapped by Lokayukta
Photo Credit : By Author

ಸಾಗರ: ಕಾರ್ಗಲ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಜಾರ್ ಲೈನ್ ರಸ್ತೆಯಲ್ಲಿ ಕೋಳಿಮಾಂಸದ ಅಂಗಡಿ ನಡೆಸಲು 50 ಸಾವಿರ ರೂ. ಹಣದ ಬೇಡಿಕೆ ಇಟ್ಟಿದ್ದು, ಹಣ ಸ್ವೀಕರಿಸುವ ವೇಳೆ ಲೋಕಾಯುಕ್ತ ದಾಳಿ ನಡೆದಿದೆ. ದಾಳಿ ನಡೆಯವ ವೇಳೆ ಪ.ಪಂ ಸದಸ್ಯ ಹರೀಶ್ ಸಾಕ್ಷಿ ನಾಶಕ್ಕೆ ಮುಂದಾಗಿದ್ದಾನೆ.

ಚಾಲಾಕಿ ಬುದ್ದಿ ತೋರಿಸಿದ ಸದಸ್ಯ 50 ಸಾವಿರ ರೂ. ಹಣವನ್ನ ಸುಟ್ಟು ಕರಕಲು ಮಾಡಿರುವ ಘಟನೆ ನಡೆದಿದೆ. ಜೋಗದ ಬಜಾರ್ ಲೈನ್ ರಸ್ತೆಯಲ್ಲಿ ಅಬ್ದುಲ್ ಕೋಳಿ ಮಾಂಸ ಮಾರಾಟದ ಅಂಗಡಿ ತೆರೆಯಲು ಪಟ್ಟಣ ಪಂಚಾಯಿತಿಯವರು ಸತಾಯಿಸಿರುತ್ತಾರೆ. 8 ನೇ ವಾರ್ಡ್ ನಲ್ಲಿ ಅಂಗಡಿ ಬರುವುದರಿಂದ ಆ ವಾರ್ಡ್ ನ ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್ ಬಳಿ ಬಂದು ಪರವಾನಗಿ ಕೊಡಿಸಲು ತಿಳಿಸಿದ್ದಾರೆ.

ಐವತ್ತು ಸಾವಿರ ಹಣಕ್ಕೆ ಬೇಡಿಕೆ ಇಟ್ಟ ಹರೀಶ್ ಪಟ್ಟಣ ಪಂಚಾಯಿತಿಯವರು ಹತ್ತಿರಕ್ಕೆ ಬರೊಲ್ಲ ಎಂದು ಹರೀಶ್ ಆಶ್ವಾಸನೆ ನೀಡಿದ್ದಾನೆ.

ಇಂದು ಆತನ ಮನೆಯಲ್ಲಿ ಹಣಪಡೆಯವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಆ ಸಂದರ್ಭದಲ್ಲಿ ಲಂಚ ಬಾಕ ಸದಸ್ಯ ಹರೀಶ್ 50 ಸಾವಿರ ರೂ.ಗಳ 2 ಸಾವಿರ ನೋಟುಗಳ ಸುಟ್ಟುಹಾಕಿ ಸಾಕ್ಷಿನಾಶಕ್ಕೆ ಮುಂದಾಗಿದ್ದು
ಹರೀಶ್ ವಶಕ್ಕೆ ಪಡೆಯಲಾಗಿದೆ. ಲೋಕಾಯುಕ್ತ ಡಿವೈಎಸ್ ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನೆಡೆದಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು