ಶಿವಮೊಗ್ಗ: ನನ್ನ ಮುಂದಿನ ಗುರಿ ತಾಳಗುಪ್ಪ, ಸಿರಸಿ ಮತ್ತು ಹುಬ್ಬಳ್ಳಿಗೆ ಹೊಸ ರೈಲ್ವೆ ಮಾರ್ಗ ರಚಿಸುವುದಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.
ಅವರು ಇಂದು ನಗರದಲ್ಲಿ ನಿರ್ಮಾಣವಾಗುತ್ತಿರುವ ಆರ್ ಒಬಿ ಗಳ ಪರಿಶೀಲನೆ ನಡೆಸಿ ನಂತರ ಮಾಧ್ಯಮಗಳ ಜೊತೆ ಮಾತನಾಡಿದರು. ರೈಲ್ವೆ ಸಂಪರ್ಕದಲ್ಲಿ ಶಿವಮೊಗ್ಗದಲ್ಲಿ ಗಣನೀಯ ಸಾಧನೆ ಮಾಡಲಾಗುತ್ತಿದೆ. ಈಗಾಗಲೇ ಕೋಟೇ ಗಂಗೂರಿನಲ್ಲಿ ರೈಲ್ವೆ 111 ಕೋಟಿಯಲ್ಲಿ ಸರ್ವಿಸ್ ಸಗಟೇಷನ್ ನಿರ್ಮಿಸಲಾಗುತ್ತಿದೆ
ಶಿವಮೊಗ್ಗ ಮತ್ತು ರಾಣೇಬೆನ್ನೂರು ರೈಲ್ವೆಗೆ 1500 ಕೋಟಿ ವೆಚ್ಚದಲ್ಲಿ ಹೊಸ ರೈಲ್ವೆ ಮಾರ್ಗ ನಿರ್ಮಿಸಲಾಗುತ್ತಿದೆ ಇನ್ನು ಮುಂದಿನ ಕೆಲವೇ ತಿಂಗಳಲ್ಲಿ ಈ ರೈಲ್ವೆ ಮಾರ್ಗ ಉದ್ಘಟಿಸಲಾಗುವುದು ಎಂದರು.
ತಾಳಗುಪ್ಪ-ಹುಬ್ಬಳ್ಳಿ ಸರ್ವೆ ಆಗಿದೆ
ಮಲೆನಾಡಿನ ಜನರಿಗೆ ಅನುಕೂಲವಾಗುವಂತೆ ಮುಂದಿನ ಬಜೆಟ್ ನಲ್ಲಿ ತಾಳಗುಪ್ಪ, ಸಿರಸಿ ಮತು ಹುಬ್ಬಳ್ಳಿಗೆ ರೈಲ್ವೆ ಸಂಪರ್ಕ ಕಲ್ಪಿಸಲು ಸರ್ವೆ ನಡೆಸಲಾಗುತ್ತಿದೆ ಎಂದು ಲೋಕಸಭಾ ಸದಸ್ಯರು ತಿಳಿಸಿದರು.