ಶಿವಮೊಗ್ಗ: “ಸಿಎಂ ಸಿದ್ದರಾಮಯ್ಯ ಅವರು ಯಾವಾಗ ಏನು ಹೇಳ್ತಾರೆ, ಯಾರಿಗೂ ಗೊತ್ತಾಗಲ್ಲ. ಅವರಿಗೆ ಅಕ್ಕಿ ಮೇಲೆ, ಅಕ್ಕನ ಮೇಲೆ ಪ್ರೀತಿ ಇದೆ. ಮುಸ್ಲಿಂರ ವೋಟ್ ಬ್ಯಾಂಕ್ ಮೇಲೆ ಬಹಳ ಪ್ರೀತಿ ಇದೆ. ಹಿಂದೂಗಳ ವಿರೋಧ ಆಗುತ್ತೇನೋ ಎಂಬ ಭಯವೂ ಇದೆ” ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಹೋಗ್ತೇನೆ ಎಂಬ ವಿಚಾರವಾಗಿ ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರರವರು, ಮೊನ್ನೆ ಮೊನ್ನೆವರೆಗೂ ನಾವು ಹೋಗಲ್ಲ ಎಂದು ಹೇಳಿದ್ದರು. ನಾನು ಯಾಕೇ ಹೋಗಬೇಕು.? ಆಯೋಧ್ಯೆನಲ್ಲೇ ರಾಮ ಇರೋದಾ..? ಇಲ್ಲಿ ಎಲ್ಲೂ ಇಲ್ವಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು. ಈಗ ಅವರೇ ನಾನು ಕಾರ್ಯಕ್ರಮ ಮುಗಿದ ಮೇಲೆ ಹೋಗ್ತಿನಿ ಎಂದಿದ್ದಾರೆ ಎಂದು ಹೇಳಿದ್ದಾರೆ.
ಬಳಿಕ ರಾಮ ಯಾರನ್ನು ಬಿಡೋದಿಲ್ಲ ರೀ. ಅಲ್ಲಿಗೆ ಕರೆಸಿಕೊಳ್ತಾನೆ. ಎಲ್ಲರೂ ಹೋಗ್ತಾರೆ. ಅಯೋಧ್ಯೆ ಈ ದೇಶದ ಸಾಂಸ್ಕೃತಿಕ ಹೃದಯ ಇದ್ದಂತೆ. ತ್ಯಾಗ, ಬಲಿದಾನ, ಹೋರಾಟದ ಪ್ರತೀಕ ಆಯೋಧ್ಯೆ ರಾಮ ಮಂದಿರ ಎಂದು ಹೇಳಿದರು.