News Karnataka Kannada
Friday, May 03 2024
ಶಿವಮೊಗ್ಗ

ಹಿಂದುಗಳ ತಾಳ್ಮೆ ಕೆಣಕುವ ಪರೀಕ್ಷೆ ನಡೆಯುತ್ತಿದೆ: ಸಚಿವ ಕೆ.ಎಸ್. ಈಶ್ವರಪ್ಪ

K'taka police gives clean chit to ex-minister Eshwarappa in contractor's suicide case
Photo Credit : News Kannada

ಶಿವಮೊಗ್ಗ: ಹಿಂದೂ ಸಮಾಜಕ್ಕೂ ಒಂದು ತಾಳ್ಮೆ ಇದೆ. ಅದನ್ನು ಪದೇಪದೇ ಪರೀಕ್ಷಿಸುವ ಕೃತ್ಯ ಕೆಲ‌ ಮುಸಲ್ಮಾನ್ ಗೂಂಡಾಗಳಿಂದ ನಡೆಯುತ್ತಿದ್ದು, ಅಂತಹವರಿಗೆ ಮುಸಲ್ಮಾನ್ ನಾಯಕರು ಬುದ್ದಿ ಹೇಳಬೇಕೆಂದು‌ ಸಚಿವ ಕೆ.ಎಸ್. ಈಶ್ವರಪ್ಪ‌ ಹೇಳಿದರು.

ಎರಡು ದಿನಗಳ ಹಿಂದೆ ಮುಸ್ಲಿಂ ಯುವಕರಿಂದ ಹಲ್ಲೆಗೊಳಗಾಗಿ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು ವೆಂಕಟೇಶ್ ಅವರ ಆರೋಗ್ಯವನ್ನು ಶನಿವಾರ ವಿಚಾರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಯುವಕರಿಗೆ ಆಕ್ರೋಶ ಬರುವ ರೀತಿಯಲ್ಲಿ ಮುಸಲ್ಮಾನ್ ಕೆಲ‌ ಗೂಂಡಾ ಯುವಕರು ನಡೆದುಕೊಳ್ಳುತ್ತಿದ್ದಾರೆ. ಇದು ಹೀಗೆ ಮುಂದುವರಿದರೆ ಆರೋಗ್ಯಕರ ಬೆಳವಣಿಕೆಯಲ್ಲ ಎಂದರು.

ಹಿಂದು ಹರ್ಷನ‌ ಕೊಲೆಯಾದ ಬಳಿಕ ನಡೆದ ಅಹಿಕರ ಘಟನೆಯ ನಂತರವೂ ಮುಸಲ್ಮಾನ್ ಕೆಲ ಗೂಂಡಾಗಳ ಆಕ್ರೋಶ ಕಡಿಮೆಯಾಗಿಲ್ಲ. ಹೀಗಾಗಿಯೇ ನಮ್ಮ ಕಾರ್ಯಕರ್ತ ಪ್ರಕಾಶ್ ಸೋದರನ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸಿದ‌ ಬಳಿಕ ಸತ್ತು ಹೋದ ಓಡ್ರೋ ಎಂದು ಜಾಗ ಖಾಲಿ‌ಮಾಡಿದ್ದಾರೆ. ಇದು ಅವರ ಮನಸ್ಥಿತಿಗೆ ಸಾಕ್ಷಿಯಾಗಿದೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು