ಶಿವಮೊಗ್ಗ : ಬಜರಂಗದಳದ ಕಾರ್ಯಕರ್ತ ಹರ್ಷ ಹುಲಿಯಂತೆ ಬದುಕಿದ್ದವನು. ಅವರನ್ನು ಹತ್ಯೆಗೈದಂತ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು. ಯಾವುದೇ ಕಾರಣಕ್ಕೂ ಹಿಂದೂ ಕಾರ್ಯಕರ್ತರು ಇದೇ ವಿಚಾರವಾಗಿ ಸೇಡು ಬೇಡವೆಂಬುದಾಗಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
‘ತೆರಿಗೆ ಪಾವತಿದಾರ’ರಿಗೆ ಬಿಗ್ ಶಾಕ್: ‘ಜಿಎಸ್ಟಿ ಕೌನ್ಸಿಲ್’ನಿಂದ ‘ತೆರಿಗೆ ಸ್ಲ್ಯಾಬ್’ ಶೇ.5ರಿಂದ ಶೇ.8ಕ್ಕೆ ಹೆಚ್ಚಿಸಲು ಚಿಂತನೆ
ಇಂದು ಶಿವಮೊಗ್ಗದ ಸೀಗೆಹಟ್ಟಿಯಲ್ಲಿ ಹತ್ಯೆಗೀಡಾದಂತ ಹರ್ಷ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಮಾಜಿ ಸಿಎಂ ಯಡಿಯೂರಪ್ಪ ಸಾಂತ್ವಾನ ಹೇಳಿದರು. ಅಲ್ಲದೇ ರಾಜ್ಯ ಸರ್ಕಾರ ಘೋಷಿಸಿದ್ದಂತ 25 ಲಕ್ಷ ಪರಿಹಾರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದರು.
ಈ ಬಳಿಕ ಮಾತನಾಡಿದಂತ ಅವರು, ಹರ್ಷ ಹಿಂದೂಗಳ ಪರವಾಗಿ ಸಿಂಹಘರ್ಜನೆ ಮಾಡಿದ್ದವರು. ಒಂದು ರೀತಿಯಲ್ಲಿ ಹುಲಿಯಂತೆ ಬದುಕಿದ್ದಂತ ಆತನನ್ನು, ಉದ್ದೇಶಪೂರ್ವಕವಾಗಿಯೇ ಹತ್ಯೆ ಮಾಡಲಾಗಿದೆ ಎಂಬುದಾಗಿ ಕಿಡಿಕಾರಿದರು.
ಈಗಾಗಲೇ ಪೊಲೀಸರು ಹರ್ಷ ಹತ್ಯೆಗೈದಂತ ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಗೆ ಯಾವುದೇ ಕಾರಣಕ್ಕೂ ಬಿಡುಗಡೆಯಾಗಬಾರದು. ಮರಣದಂಡನೆಯಂತ ಶಿಕ್ಷೆ ವಿಧಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲಾ ಪ್ರಯತ್ನ ಮಾಡಲಿದೆ ಎಂಬುದಾಗಿ ಹೇಳಿದರು.
ನಮ್ಮ ಕಾರ್ಯಕರ್ತರಿಗೆ ಮನವಿ ಮಾಡುವೆ, ಯಾವುದೇ ಕಾರಣಕ್ಕೂ ಯಾರೊಬ್ಬರೂ ಕಾನೂನು ಕೈಗೆತ್ತಿಕೊಳ್ಳುವಂತ ಕೆಲಸವನ್ನು ಮಾಡಬಾರದು. ಹರ್ಷ ಹತ್ಯೆ ಪ್ರಕರಣದ ಆರೋಪಿಗಳಿಗೆ ಕಾನೂನು ಪ್ರಕಾರ ಶಿಕ್ಷೆಯಾಗಲಿದೆ ಎಂದು ತಿಳಿಸಿದರು.