ಶಿವಮೊಗ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿವಮೊಗ್ಗ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿರುವ ಬೃಹತ್ ಕೋವಿಡ್ -19 ಲಸಿಕಾ ಮೇಳವನ್ನು ಸಂಸದ ಬಿ. ವೈ ರಾಘವೇಂದ್ರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು,ಈ ರೀತಿಯ ಬೃಹತ್ ಲಸಿಕಾ ಅಭಿಯಾನ ವಿಶ್ವದಲ್ಲೇ ಮೊದಲು. ಜೊತೆಗೆ ನಮ್ಮ ದೇಶದಲ್ಲಿ ಯಾವುದೇ ರೀತಿಯ ಲಸಿಕೆಯ ಕೊರತೆ ಇಲ್ಲ. ಇಂದು ಮುಕ್ತವಾಗಿ ಕೋವಿಡ್ ಲಸಿಕೆಯನ್ನು ಕೊಡುವ ಕೆಲಸವಾಗುತ್ತಿದೆ. ಕೋವಿಡ್ ಎರಡು ಅಲೆಯನ್ನು ನಾವು ನೋಡಿದ್ದೇವೆ. ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು. ಎಲ್ಲರು ವ್ಯಾಕ್ಸಿನ್ ಪಡೆಯಬೇಕು ಎಂದು ಮನವಿ ಮಾಡಿದರು.
ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ ವಿಜಯೇಂದ್ರ ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್, ಎಂ. ಎಲ್. ಸಿ ರುದ್ರೇಗೌಡ,ದತ್ತಾತ್ರಿ ಮತ್ತಿತರರು ಉಪಸ್ಥಿತರಿದ್ದರು