ಕೆಚ್ಚೆದೆಯ ನಾಯಕರು, ಧೀಮಂತ ಹೋರಾಟಗಾರರೂ, ರೈತರ ಕಣ್ಮಣಿ, ಕರ್ನಾಟಕದ ಹಳ್ಳಿಗಳ ಮೂಲೆಮೂಲೆಗೆ ತಿರುಗಾಡಿ 13 ವರ್ಷಗಳ ಕಾಲ ಅವಿಶ್ರಾಂತವಾಗಿ ದುಡಿದು ಹಳ್ಳಿಗರ ಬದುಕಿಗೆ ನ್ಯಾಯ ಸಿಕ್ಕಲೇಬೇಕು ಎನ್ನುತ್ತಾ ಅಮರರಾದ ರೈತ ಸಂಘದ ಸಂಸ್ಥಾಪಕರಾದ ಎನ್.ಡಿ.ಸುಂದರೇಶ್ ರವರ 29ನೇ ನೆನಪಿನ ಸಭೆ ಮತ್ತು ರಕ್ತದಾನ ಶಿಬಿರವನ್ನು ಶಿವಮೊಗ್ಗ ರೈತ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅಮರರಾದ ರೈತ ನಾಯಕರ ಭಾವಚಿತ್ರಕ್ಕೆ ಹೂವನ್ನು ಅರ್ಪಿಸಿ ಚಾಲನೆ ನೀಡಲಾಯಿತು.
ಈ ಕಾರ್ಯಕ್ರಮಕ್ಕೆ ರಾಜ್ಯಾಧ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ಗೌರವಾಧ್ಯಕ್ಷರಾದ ಹೆಚ್.ಆರ್ ಬಸವರಾಜಪ್ಪ,
ಖಜಾಂಚಿಗಳಾದ ಡಾ|| ಬಿ.ಎಂ ಚಿಕ್ಕಸ್ವಾಮಿ, ಉಪಾಧ್ಯಕ್ಷರಾದ ಹಿಟ್ಟೂರು ರಾಜು, ಟಿ.ಎಂ ಚಂದ್ರಪ್ಪ ಮತ್ತು ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳು ಹಾಜರಿದ್ದರು.