News Karnataka Kannada
Friday, May 03 2024
ಶಿವಮೊಗ್ಗ

ಶಿವಮೊಗ್ಗದಲ್ಲಿ ನಡೆದ ಗಲಾಟೆಗೆ ಕೆ.ಎಸ್​.ಈಶ್ವರಪ್ಪ ನೀಡಿದ ಹೇಳಿಕೆ ಕಾರಣ: ರಿಯಾಜ್ ಅಹಮದ್

Inauguration of administrative office of Federation of Bunts Associations at Mulki on April 5
Photo Credit :

ಐಪಿಸಿ ಸೆಕ್ಷನ್​ 153ಎ, 295ಎ, 504, 505(2), 34 ನ ಅಡಿಯಲ್ಲಿ ಎಫ್​ಐಆರ್

ಹಿಂದೂ ಹರ್ಷನ ಕೊಲೆ ಪ್ರಕರಣದ ನಂತರ ಶಿವಮೊಗ್ಗ ನಗರದಲ್ಲಿ ನಡೆದ ಗಲಾಟೆಗೆ ಸಚಿವ ಕೆ.ಎಸ್​.ಈಶ್ವರಪ್ಪರವರು ಹಾಗೂ ಪಾಲಿಕೆ ಸದಸ್ಯ ಚೆನ್ನಬಸಪ್ಪರವರು ನೀಡಿದ ಹೇಳಿಕೆ ಕಾರಣವಾಗಿದೆ.

ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಜವಾಬ್ದಾರಿಯುತ ಸ್ಥಾನಗಳಲ್ಲಿದ್ದರೂ ಸಹ ಜವಾಬ್ದಾರಿಗಳನ್ನ ನಿರ್ವಹಿಸದೇ ಗಲಭೆ ಸೃಷ್ಟಿಸುವಂತಹ ಹೇಳಿಕೆಗಳನ್ನ ನೀಡಿದ್ದರಿಂದಲೇ ಸೀಗೆಹಟ್ಟಿ, ರವಿವರ್ಮ ಬೀದಿ ಸೇರಿದಂತೆ ಹಲವು ಕಡೆಗಳಲ್ಲಿ ಕೋಮುಗಲಭೆ ಉಂಟಾಗಿದೆ ಎಂದು ಪೀಸ್ ಆರ್ಗನೈಸೇಷನ್​ನ ಕಾರ್ಯದರ್ಶಿ ರಿಯಾಜ್ ಅಹಮದ್ ಆರೋಪಿಸಿದ್ದರು.

ಈ ಸಂಬಂಧ ದೂರು ಕೊಟ್ಟರೂ ಪೊಲೀಸರು ಎಫ್​ಐಆರ್​ ದಾಖಲಿಸಿಲ್ಲ ಎಂದು ಆರೋಪಿಸಿದ್ದ ದೂರುದಾರರು ಅಪರ ಮುಖ್ಯ ಮಹಾನಗರ ದಂಢಾಧಿಕಾರಿಗಳ ವಿಶೇಷ ನ್ಯಾಯಾಲಯ ಬೆಂಗಳೂರು, ಇಲ್ಲಿಗೆ ಮೊರೆಹೋಗಿದ್ದರು.

ಈ ಸಂಬಂಧ ಕೋರ್ಟ್​ ನೀಡಿದ್ದ ಆದೇಶದನ್ವಯ, ಸಲ್ಲಿಸಿದ್ದ ಪಿಸಿಆರ್​ ಸಂಬಂಧ ಇದೀಗ ದೊಡ್ಡಪೇಟೆ ಠಾಣೆಯಲ್ಲಿ ಕೇಸ್​ ದಾಖಲಿಸಲಾಗಿದೆ. ಐಪಿಸಿ ಸೆಕ್ಷನ್​ 153ಎ, 295ಎ,504, 505(2),34 ನ ಅಡಿಯಲ್ಲಿ ಎಫ್​ಐಆರ್ ದಾಖಲಾಗಿದೆ.

ಎನ್​ಕ್ವೈರಿ ಹೇಗೆ ನಡೆಯುತ್ತದೆ
ಸದ್ಯ ದಾಖಲಾಗಿರುವ ಪ್ರಕರಣ ಕೊರ್ಟ್​ ಪಿಸಿಆರ್​ನ ಅಡಿಯಲ್ಲಾದ್ದರಿಂದ, ಪ್ರಕರಣದಲ್ಲಿ ಯಾವುದೇ ರೀತಿಯ ಬಂಧನ ಪ್ರಕ್ರಿಯೆ ಇರುವುದಿಲ್ಲ. ಕೋರ್ಟ್ಗಗೆ ತನಿಖಾಧಿಕಾರಿ ವಿಸ್ತೃತ ವರದಿಯೊಂದನ್ನ ಸಲ್ಲಿಸುತ್ತಾರೆ. ಈ ವರದಿಯ ಅನ್ವಯ ಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದೆ. ವಿಚಾರಣೆ ಸಂದರ್ಭದಲ್ಲಿ ಹಾಜರಾಗಬೇಕಾಗುತ್ತದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಶ್ವರಪ್ಪ ಹಾಗೂ ಚೆನ್ನಬಸಪ್ಪರವರು ನೀಡಿದ್ದ ಹೇಳಿಕೆಯ ರೆಕಾರ್ಡ್​ ಮತ್ತು ನಂತರ ನಡೆದ ಘಟನೆಗಳು, ಹಿನ್ನೆಲೆ ಹಾಗೂ ಪ್ರಕರಣದಲ್ಲಿ ಸೆಕ್ಷನ್​ ಉಲ್ಲಂಘನೆಯಾಗಿದ್ದಕ್ಕೆ ಸಾಕ್ಷ್ಯಗಳು ಸೇರಿದಂತೆ ಪೊಲೀಸ್ ಇಲಾಖೆ ನೇರವಾಗಿ ಕೋರ್ಟ್​ಗೆ ರಿಪೋರ್ಟ್​ ನೀಡಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
190
Ismail M Kutty

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು