ಶಿವಮೊಗ್ಗ: ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿ, ಹಣ ವಸೂಲಿ ಮಾಡಿದಂತ ಪ್ರಕರಣದಲ್ಲಿ, ನಗರದ ಸಿಇಎಸ್ ಠಾಣೆಯ ಪೊಲೀಸರು, ಶಂಕಿತ ಉಗ್ರನ ಪತ್ನಿಯನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.
ಶಿವಮೊಗ್ಗ ನಗರದಲ್ಲಿ ಉದ್ಯಮಿಯೊಬ್ಬರಿಗೆ ಜುಲೈ.14ರಂದು ಕರೆ ಮಾಡಿದ್ದಂತ ಕುಖ್ಯಾತ ರೌಡಿ ಶೀಟರ್ ಹೆಬ್ಬೆಟ್ ಮಂಜ ಎಂದು ಪರಿಚಯ ಮಾಡಿಕೊಂಡಿದ್ದನು. 5 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ನನ್ನ ಬಳಿ ಅಷ್ಟೊಂದು ಹಣ ಇಲ್ಲವೆಂದಾಗ, ಕೊಲೆ ಬೆದರಿಕೆ ಹಾಕಿದ್ದರು.
ಇದರಿಂದಾಗಿ ಬೆಚ್ಚಿದಂತ ಉದ್ಯಮಿ, ಅವರು ಹೇಳಿದಂತ ಬ್ಯಾಂಕ್ ಖಾತೆಗೆ 50 ಸಾವಿರ ಹಣ ಜಮೆ ಮಾಡಿದ್ದರು. ಈ ಬಳಿಕವೂ ವಿವಿಧ ಸಂಖ್ಯೆಗಳಿಂದ ಪೋನ್ ಕಾಲ್, ಮೆಸೇಜ್ ಉದ್ಯಮಿಗೆ ನಿರಂತರವಾಗಿ ಹಣಕ್ಕಾಗಿ ಬರ್ತಾ ಇತ್ತು. ಹೀಗಾಗಿ ಶಿವಮೊಗ್ಗದ ಸೈಬರ್ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಈ ದೂರು ಆದರಿಸಿ ಸಿಇಎಸ್ ಠಾಣೆ ಇನ್ಸ್ ಪೆಕ್ಟರ್ ಕೆ.ಟಿ.ಗುರುರಾಜ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದಂತ ಸೈಬರ್ ಠಾಣೆ ಪೊಲೀಸರು, ಭಟ್ಕಳಕ್ಕೆ ತೆರಳಿ ಸಾಹೀರಾ ಬಾನು ಎಂಬಾಕೆಯನ್ನು ಬಂಧಿಸಿದ್ದಾರೆ. ಈಕೆಯನ್ನು ವಿಚಾರಣೆಗೆ ಒಳಪಡಿಸಿದಾಗ, ಆಕೆಯ ಪತಿ ಶಂಕಿತ ಉಗ್ರ ಸದ್ದಾ ಹುಸೇನ್ ಎಂದು ತಿಳಿದು ಬಂದಿದೆ. ಆತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರೋದಾಗಿ ತಿಳಿದು ಬಂದಿದೆ. ಇದೀಗ ಆತನ ಪತ್ನಿಯನ್ನು ಕೂಡ ಬಂಧಿಸಿ, ಜೈಲಿಗೆ ಕಳುಹಿಸಲಾಗಿದೆ.