ತೀರ್ಥಹಳ್ಳಿ : ಶಿಕಾರಿಗೆ ಹೋಗಿದ್ದ ವೇಳೆ ಬಂದೂಕು ಮಿಸ್ ಫೈರ್ ಆಗಿ ಬಿಜೆಪಿ ಮುಖಂಡ, ನೊಣಬೂರು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಕಾಂತ್ ರಾಜ್ ಎಂಬುವವರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ಬಳಿ ಶಿಕಾರಿಗೆ ಹೋಗಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಇದೀಗ ಇಷ್ಟೇ ಮಾಹಿತಿ ಸಧ್ಯಕ್ಕೆ ತಿಳಿದು ಬಂದಿದ್ದು ಕಾಂತರಾಜ್ ಅವರಿಗೆ ಸುಮಾರು 38 ವರ್ಷ ಆಗಿತ್ತು. ಮದುವೆ ಆಗಿರಲಿಲ್ಲ. ಮೃತದೇಹವನ್ನು ತೀರ್ಥಹಳ್ಳಿ ಜೆಸಿ ಆಸ್ಪತ್ರೆಯಲ್ಲಿ ಇಡಲಾಗಿದೆ.