ಶಿವಮೊಗ್ಗ: ಗೋಹತ್ಯಾ ನಿಷೇಧ ಕಾನೂನು ಇನ್ನಷ್ಟು ಕಠಿಣ ಮಾಡುವ ಅಗತ್ಯ ಇದೆ ಎನಿಸಿದರೆ ಮಾರ್ಪಾಡು ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿ, ಗೋ ಹತ್ಯಾ ನಿಷೇಧ ಕಾನೂನು ಇದ್ದರೂ ಕೂಡ ಅಕ್ರಮವಾಗಿ ಗೋ ಸಾಗಾಣಿಕೆ ಮಾಡುತ್ತಿದ್ದಾರೆ. ಇದನ್ನು ತಡೆಯಲು ಮುಂದಾದವರ ಮೇಲೆ ಹತ್ಯೆ ಯತ್ನ ಕೂಡ ನಡೆಯುತ್ತಿದೆ.
ಎರಡು ದಿನಗಳ ಹಿಂದೆ ತೀರ್ಥಹಳ್ಳಿಯಲ್ಲಿ ಇಂತಹ ಘಟನೆ ನಡೆದಿದೆ. ಹಾಗಾಗಿ ಕಾನೂನು ಬಿಗಿ ಮಾಡಬೇಕು ಎನಿಸಿದರೆ ಕಾನೂನು ತಜ್ನರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.