News Karnataka Kannada
Thursday, May 02 2024
ಶಿವಮೊಗ್ಗ

ಆರ್‌ಎಸ್‌ಎಸ್ ನಿಂದ ಸಂಸ್ಕಾರ: ಸಚಿವ ಕೆ.ಎಸ್.ಈಶ್ವರಪ್ಪ

K S Eshwarappa
Photo Credit :

ಶಿವಮೊಗ್ಗ : ಆರ್‌ಎಸ್‌ಎಸ್ ಹಿನ್ನೆಲೆ ಇರುವ ಸಾವಿರಾರು ಮಂದಿ ಐಎಎಸ್, ಐಪಿಎಸ್ ಆಗುತ್ತಿದ್ದಾರೆ ಎನ್ನುವುದನ್ನು ಒಪ್ಪುವುದಿಲ್ಲ. ಎಲ್ಲಾ ಕ್ಷೇತ್ರಗಳಲ್ಲಿಯೂ ಕೂಡ ಸಂಘದ ಹಿನ್ನೆಲೆಯವರು ಇದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

ಗುರುವಾರ ಶಿವಮೊಗ್ಗ ದಸರಾ ಉತ್ಸವಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಾದರೂ ಆರ್‌ಎಸ್‌ಎಸ್ ಸಹಕಾರ ಕೇಳಿದರೆ ಅವರಿಗೆ ಸಹಾಯ ಮಾಡಿದೆ. ಆರ್‌ಎಸ್‌ಎಸ್ ನಿಂದ ಸಂಸ್ಕಾರ ಪಡೆಯುತ್ತಾರೋ, ಅವರೆಲ್ಲರೂ ದೇಶ ಸಂರಕ್ಷಣೆ ಮಾಡುತ್ತಾರೆ. ಅದು ಯಾವುದೇ ಕ್ಷೇತ್ರ ಇರಬಹುದೆಂದು ಹೇಳಿದರು.

ಕೊರೋನಾ ಭೀತಿಯ ನಡುವೆಯೇ ದಸರಾವನ್ನು ಈ ಬಾರಿ ಆಚರಿಸಲಾಗುತ್ತಿದೆ. ನಿರ್ಭಂಧದ ನಡುವೆಯೇ ಈ ಬಾರಿಯೂ ದಸರಾ ಆಚರಣೆ ಮಾಡಲಾಗುತ್ತಿದೆ. ವಿಶ್ವ ವಿಖ್ಯಾತ ದಸರಾವನ್ನು ಈ ಬಾರಿ ರಾಜಕೀಯ ಮುತ್ಸದ್ದಿ ಎಸ್.ಎಂ. ಕೃಷ್ಣ ಅವರು ಉದ್ಘಾಟಿಸಿರುವುದು ಸಮಯೋಚಿತವಾಗಿದೆ ಎಂದರು.

ನನ್ನ ಹೆಸರು ಹೇಳಿಕೊಂಡು ಕೆಲವರು ಹಣ ವಸೂಲಿ ಮಾಡಿರುವುದು ಗಮನಕ್ಕೆ ಬಂದಿದೆ. ಹಣ ಕಳೆದಕೊಂಡ ಮೇಲೆ ನನ್ನ ಬಳಿ ಬಂದಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಮೂವರು ತಲೆ ಮರೆಸಿಕೊಂಡಿದ್ದಾರೆ. ಅವರ ಬಂಧನಕ್ಕೆ ಸೂಚನೆ ನೀಡಲಾಗಿದೆ. ಜನ ಇಂತಹವರ ಬಗ್ಗೆ ಹುಷಾರಾಗಿ ಇರಬೇಕೆಂದು ಹೇಳಿದರು.

ಸಂಸ್ಕಾರ ಇಲ್ಲದ ವ್ಯಕ್ತಿಗಳು ಈ ಮಾದಕ ವಸ್ತುಗಳ ದುಶ್ಚಟದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ. ಪೋಷಕರು ಮಕ್ಕಳ ಬಗ್ಗೆ ನಿಗಾ ಇಡಬೇಕು. ಸ್ಟಾರ್ ನಟರೆಂದಾಕ್ಷಣ ಯಾರೂ ಕೂಡ ಮೇಲಿಂದ ಇಳಿದು ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು