ಎಲ್ಲರೂ ಶಾಂತಿ ಕಾಪಾಡಿ, ಹಿಂದೂ ಮುಸ್ಲಿಂ ಗಲಾಟೆ ಬೇಡ, ಎಲ್ಲರೂ ನನ್ನ ಸಹೋದರರಂತೆಯೇ. ನಾವೆಲ್ಲರೂ ಮನುಷ್ಯರೇ ಅದನ್ನು ಮರೆಯುವುದು ಬೇಡ ಎಂದು ಶಿವಮೊಗ್ಗದಲ್ಲಿ ಕೊಲೆಯಾದ ಬಜರಂಗದಳ ಕಾರ್ಯಕರ್ತ ಹರ್ಷ ಅವರ ಸಹೋದರಿ ಹೇಳಿದ್ದಾರೆ.
ಎಲ್ಲರೂ ನನ್ನ ಸಹೋದರರೇ, ಯಾರಿಗೆ ನೋವಾದರೂ ನನಗೆ ನೋವಾಗುತ್ತದೆ. ಈ ಗಲಾಟೆ ಎಲ್ಲ ಬಿಟ್ಟುಬಿಡಿ. ಎಲ್ಲರೂ ಮೊದಲು ಮನೆಗೆ, ಅವರ ತಂದೆ-ತಾಯಿಗಳಿಗೆ ಒಳ್ಳೆಯ ಮಕ್ಕಳಾಗಬೇಕು. ಜಾತಿ, ಮತದ ಬೇಧ ನಮ್ಮಲ್ಲಿಲ್ಲ. ಹರ್ಷನನ್ನು ಕಳೆದುಕೊಂಡು ನೋವು ಮಾತ್ರ ನಮ್ಮಲ್ಲಿದೆ. ನನ್ನ ತಾಯಿ ರೋಧನೆ ನೋಡಲಾಗುತ್ತಿಲ್ಲ, ಈ ಸ್ಥಿತಿ ಯಾವ ತಾಯಿಗೂ ಬೇಡ, ಶಾಂತಿಯಿಂದ ಇರೋಣ ಎಂದಿದ್ದಾರೆ.