ಶಿವಮೊಗ್ಗ: ಯಾವುದೇ ತಪ್ಪು ಮಾಡದ ಈಶ್ವರಪ್ಪ ಅವರು ಅನಿವಾರ್ಯವಾಗಿ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದೆ.ಅಪರಾಧ ಮಾಡದೇ ಇದ್ದರೂ ರಾಜೀನಾಮೆ ನೀಡಬೇಕಾಯಿತು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಎರಡು ಮೂರು ತಿಂಗಳಲ್ಲಿ ತನಿಖೆ ಪೂರ್ಣ ಮಾಡಿದರೆ ಈಶ್ವರಪ್ಪ ಅವರು ನಿರಪರಾಧಿ ಎಂಬುದು ತಿಳಿಯಲಿದೆ ಎಂದರು.
ಶಿವಮೊಗ್ಗದ ಬಿಜೆಪಿ ಕಾರ್ಯಾಲಯಕ್ಕೆ ಆಗಮಿಸಿದ ಅವರು, ತನಿಖೆ ನಡೆದು ಆರೋಪದಿಂದ ಹೊರಬಂದರೆ ಈಶ್ವರಪ್ಪ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಈಶ್ವರಪ್ಪ ಸೇರಲು ಯಾವುದೇ ಅಡ್ಡಿ ಇರುವುದಿಲ್ಲ ಎಂದರು.
ಇದನ್ನು ಖಂಡಿತಾ ಈಶ್ವರಪ್ಪ ಎದುರಿಸಿ ಈ ಪ್ರಕರಣದಿಂದ ಹೊರಬಂದು ಮತ್ತೆ ಸಚಿವರಾಗಲಿದ್ದಾರೆ. ತನಿಖೆ ಮುಗಿದ ಬಳಿಕ ಈಶ್ವರಪ್ಪ ಅವರು ನಿರ್ದೋಷಿ ಎಂಬುದು ಸ್ಪಷ್ಟವಾಗಲಿದೆ ಎಂದು ಯಡಿಯೂರಪ್ಪ ಹೇಳಿದರು.