ಶಿವಮೊಗ್ಗ: ತಮಿಳುನಾಡು ರಾಜ್ಯದ ದೇವಾಲಯಗಳಿಗೆ ಹೋಗಿ ಜಿಲ್ಲೆಗೆ ಮರಳಿ ಬಂದವರಲ್ಲಿ ಸೋಂಕು ಕಾಣಿಸಿಕೊಂಡಿದೆ.ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ಮತ್ತಷ್ಟು ಹೆಚ್ಚುವ ಭೀತಿ ಎದುರಾಗಿದೆ.
ಓಂ ಶಕ್ತಿ ಯಾತ್ರೆಗೆ ಹೋಗಿ ಬಂದ 63 ಜನರಲ್ಲಿ ರವಿವಾರ ಕೋವಿಡ್ ಸೋಂಕು ಪತ್ತೆಯಾಗಿದೆ.ಶನಿವಾರದವರೆಗೂ ಓಂ ಶಕ್ತಿ ಯಾತ್ರೆಗೆ ಹೋಗಿ ಬಂದಿದ್ದ 20 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು.
ಇದೀಗ ಮತ್ತೆ 63 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟಾರೆಯಾಗಿ ಇದುವರೆಗೆ ಓಂ ಶಕ್ತಿ ಯಾತ್ರೆಗೆ ಹೋಗಿ ಬಂದ 83 ಜನರಲ್ಲಿ ಸೋಂಕು ಪತ್ತೆಯಾಗಿದೆ.
ಶನಿವಾರ ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 117 ಕೋವಿಡ್ ಪ್ರಕರಣಗಳು ಪತ್ತೆಯಾಗಿತ್ತು. ಇಂದೂ ನೂರರ ಗಡಿ ದಾಟುವ ಸಾಧ್ಯತೆಯಿದೆ. ಶಿಕಾರಿಪುರ, ಭದ್ರಾವತಿ, ಹೊಸನಗರ ತಾಲೂಕಿನಿಂದ ತಮಿಳುನಾಡಿನ ದೇವಾಲಯಗಳಿಗೆ ಭಕ್ತರು ತೆರಳಿದ್ದು, ಶಿವಮೊಗ್ಗದ ಜೊತೆಗೆ ಈ ತಾಲೂಕುಗಳಿಗೂ ಸೋಂಕು ವ್ಯಾಪಿಸಿದೆ.