ಚಿಕ್ಕಮಗಳೂರು: ನಗರದ ಖಾಸಗಿ ಬಸ್ ನಿಲ್ದಾಣದ ಹತ್ತಿರಆಟೋಚಾಲಕರ ಬಳಿ ಮತದಾನಜಾಗೃತಿಕಾರ್ಯಕ್ರಮ ನಡೆಸುತ್ತಿದ್ದ ಬಿಜೆಪಿ ಯುವ ಮೋರ್ಚಾಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ಚುನಾವಣಾಧಿಕಾರಿ ಮೇನಕಾ ವಿ.ಚೌಹಾಣ್ ಅವರನ್ನು ಚುನಾವಣಾ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು ಎಂದುಜಿಲ್ಲಾ ಬಿಜೆಪಿ ಯುವ ಮೋರ್ಚಾ ಒತ್ತಾಯಿಸಿದೆ.
ಮಾ.26ರಂದು ಬೆಳಗ್ಗೆ ಭಾರತೀಯಜನತಾ ಪಾರ್ಟಿಯಯುವಮೋರ್ಚಾಕಾರ್ಯಕರ್ತರತಂಡ ನಗರದ ಖಾಸಗಿ ಬಸ್ ನಿಲ್ದಾಣ ಹತ್ತಿರ ಆಟೋಚಾಲಕರೊಂದಿಗೆ ಮತದಾನಜಾಗೃತಿ ಮೂಡಿಸುವ ಕಾರ್ಯದಲ್ಲಿತೊಡಗಿದ್ದ ಸಂದರ್ಭದಲ್ಲಿ ಎಎಸ್ಪಿ ನೇತೃತ್ವದಪೊಲೀಸ್ತಂಡ ಆಗಮಿಸಿ ಏಕಾಏಕಿ ಯುವ ಮೋರ್ಚಾಕಾರ್ಯಕರ್ತರನ್ನು ಬಂಧಿಸಿರುವುದನ್ನು ಜಿಲ್ಲಾಯುವ ಮೋರ್ಚಾಖಂಡಿಸುತ್ತದೆ ಎಂದು ಗುರುವಾರ ಜಿಲ್ಲಾಚುನಾವಣಾಧಿಕಾರಿಗೆ ನೀಡಿರುವ ಮನವಿಯಲ್ಲಿಜಿಲ್ಲಾ ಬಿಜೆಪಿ ಯುವ ಮೋರ್ಚಾಅಧ್ಯಕ್ಷ ಸಂತೋಷ್ಕೋಟ್ಯಾನ್ ತಿಳಿಸಿದ್ದಾರೆ.
ಮತದಾನದ ಮಹತ್ವ, ಮತದಾನ ಮಾಡುವಉದ್ದೇಶ ಸೇರಿದಂತೆ ಮತದಾನದ ಬಗ್ಗೆ ಜಾಗೃತಿ ಮೂಡಿಸುವಕಾರ್ಯ ಶಾಂತಿಯುತವಾಗಿ ನಡೆಯುತ್ತಿದ್ದ ಸಂದರ್ಭದಲ್ಲಿ ಕೆಲ ಕಾರ್ಯಕರ್ತರು ತಮ್ಮ ಕೈಯಲ್ಲಿ ಹಿಡಿದಿದ್ದ ದೇಶದ ಹೆಮ್ಮಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಭಾವಚಿತ್ರವನ್ನುಒತ್ತಾಯಪೂರ್ವಕವಾಗಿ ಪೊಲೀಸರು ವಶಕ್ಕೆ ಪಡೆದುಕೊಳ್ಳುವ ಮೂಲಕ ಜಿಲ್ಲಾಡಳಿತ ಒಂದು ಪಕ್ಷದ ಪರವಾಗಿಏಕಪಕ್ಷೀಯವಾಗಿ ನಡೆದುಕೊಂಡಿದೆಎಂದು ಆರೋಪಿಸಿದ್ದಾರೆ.
ನಗರ ಪೊಲೀಸ್ಠಾಣೆಯಲ್ಲಿ ಕ್ರೈಂ ನಂ.51/2024 ರಅಡಿಯಲ್ಲಿ ಕಲಂ 188 ಐಪಿಸಿ ಪ್ರಕಾರಯುವ ಮೋರ್ಚಾ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣವನ್ನು ದಾಖಲಿಸಿದ್ದು, ಸದರಿ ಪ್ರಕರಣದಲ್ಲಿಯಾವುದೇ ವ್ಯಕ್ತಿಯ ಹೆಸರನ್ನು ನೊಂದಾಯಿಸಿರುವುದಿಲ್ಲ. ಆದರೆ, ಭಾರತೀಯಜನತಾ ಪಾರ್ಟಿಯ ಕಾರ್ಯಕರ್ತರೆಂದು ಉಲ್ಲೇಖಿಸಲಾಗಿದೆ ಎಂದು ಮನವಿಯಲ್ಲಿ ಹೇಳಿದ್ದಾರೆ.
ಇಷ್ಟೆಲ್ಲ ಘಟನೆಗಳಿಗೆ ಚುನಾವಣಾಧಿಕಾರಿ ಮೇನಕಾ ವಿ.ಚೌಹಾಣ ಏಕಪಕ್ಷೀಯವಾಗಿ ಕಾರ್ಯನಿರ್ವಹಿಸಿರುವುದು ಕಾರಣವಾಗಿರುತ್ತದೆ. ಸುಳ್ಳು ಪ್ರಕರಣ ದಾಖಲಿಸಲು ಕಾರಣರಾಗಿರುವ ಈ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಚುನಾವಣಾ ಕಾರ್ಯಗಳು ಪಾರದರ್ಶಕವಾಗಿ ನಡೆಸುವ ಉದ್ದೇಶದಿಂದ ಅವರನ್ನುಚುನಾವಣಾಕರ್ತವ್ಯದಿಂದ ಬಿಡುಗಡೆಗೊಳಿಸಬೇಕು ಎಂದುಯುವ ಮೋರ್ಚಾ ಒತ್ತಾಯಿಸುತ್ತದೆ ಎಂದು ತಿಳಿಸಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭದಲ್ಲಿ ಜಿಲ್ಲಾಯುವ ಮೋರ್ಚಾಉಪಾಧ್ಯಕ್ಷೆಅಂಕಿತಾ, ಪ್ರಧಾನ ಕಾರ್ಯದರ್ಶಿ ಸಚಿನ್, ಕಾರ್ಯದರ್ಶಿ ಶಶಿ ಆಲ್ದೂರು, ಖಜಾಂಚಿ ಭರತ್, ನಗರಯುವ ಮೋರ್ಚಾ ಅಧ್ಯಕ್ಷ ಜೀವನ್ಕೋಟೆ, ಪ್ರಧಾನ ಕಾರ್ಯದರ್ಶಿಗೌತಮ್ಅಟಕ್, ಪುನಿತ್, ಪ್ರಮುಖರಾದ ಮಂಜುನಾಥ್, ಮಧು, ಪ್ರಶಾಂತ, ಪಾರ್ಥಿಬನ್, ಕಾರ್ತಿಕ್ ಉಪಸ್ಥಿತರಿದ್ದರು.