ಚಿಕ್ಕಮಗಳೂರು: ಬಾಂಗ್ಲಾದಿಂದ ದೇಶಕ್ಕೆ ಅಕ್ರಮವಾಗಿ ನುಸುಳಿ ಬಂದು ಜಿಲ್ಲೆಯ ವಿವಿಧ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಾ ಸ್ಥಳೀಯರ ಮೇಲೆಯೇ ದಬ್ಬಾಳಿಕೆ ಮಾಡುತ್ತಿದ್ದು ಇಂತಹವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಇಂದು ಜಾಗರದಲ್ಲಿ ಹಿಂದೂಪರ ಸಂಘಟನೆಯ ಮುಖಂಡರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಕಳೆದ ವಾರ ಖಾಸಗಿ ಎಸ್ಟೇಟ್ ಕಂಪನಿಯಲ್ಲಿ ಬಾಂಗ್ಲಾ ವಲಸಿಗ ಮುಸಲ್ಮಾನರಿಂದ ದಾಳಿಗೊಳಗಾದ ಜಾಗರ ಹೋಬಳಿ ಉಲವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಪಂಚಾಯತಿ ಸದಸ್ಯ ಹಾಗೂ ದಾಳಿಗೆ ಒಳಗಾದ ಗ್ರಾಮಸ್ಥರು ಕಾರ್ಮಿಕರ ಜೊತೆ ಇಂದು ಹಿಂದೂ ಪರ ಸಂಘಟನೆಗಳು ಜಾಗರ ಹೋಬಳಿಯಲ್ಲಿ ಪ್ರತಿಭಟನೆಯನ್ನು ಮಾಡಿ ಗ್ರಾಮ ಪಂಚಾಯಿತಿಗೆ ಪೊಲೀಸ್ ಇಲಾಖೆಗೆ ಮನವಿಯನ್ನು ಸಲ್ಲಿಸಿ ಸಹಿ ಸಂಗ್ರಹವನ್ನು ಮಾಡಲಾಯಿತು.
ಜಾಗ್ರ ಜಾಗೃತಿ ಸಮಿತಿಗೆ ಹಿಂದೂ ಪರ ಸಂಘಟನೆಗಳಾದ ವಿಶ್ವ ಹಿಂದೂ ಪರಿಷದ್ ಬಜರಂಗದಳ ,ಶ್ರೀರಾಮ ಸೇನೆ , ವಂದೇ ಮಾತರಂ ಟ್ರಸ್ಟ್ ಹಾಗೂ ಕಾಮಧೇನು ಗೋ ಶಾಲೆ ಬೆಂಬಲವನ್ನು ನೀಡಿ ಚಿಕ್ಕಮಗಳೂರಿಂದ ಜಾಗ್ರಾ ಚಲೋ ಹಮ್ಮಿಕೊಳ್ಳಲಾಗಿತ್ತು.
ಗ್ರಾಮಸ್ಥರೊಂದಿಗೆ ಪ್ರತಿಭಟನೆಯಲ್ಲಿ ಎಲ್ಲಾ ಹಿಂದೂ ಪರ ಸಂಘಟನೆಗಳು ಭಾಗವಹಿಸಿ ಅಕ್ರಮವಾಗಿ ಬಂದಿರುವ ಬಾಂಗ್ಲಾ ರೋಹಿಂಗ್ಯಗಳನ್ನು ಗಡಿಪಾರು ಮಾಡದಿದ್ದಲ್ಲಿ ಮುಂದಿನ ದಿನ ಉಗ್ರ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಜರಂಗದಳ ಜಿಲ್ಲಾ ಸಹ ಸಂಯೋಜಕ ಅಮಿತ್ ಗೌಡ ,ವಿಶ್ವ ಹಿಂದೂ ಪರಿಷದ್ ನಗರ ಅಧ್ಯಕ್ಷರು ಆಟೋ ಶಿವಣ್ಣ ಶ್ರೀರಾಮ ಸೇನೆ ಜಿಲ್ಲಾಧ್ಯ ಕ್ಷರು ರಂಜಿತ್ ಶೆಟ್ಟಿ ಬಜರಂಗದಳ ನಗರ ಸಂಯೋಜಕ ಶ್ಯಾಂ ವಿ ಗೌಡ ಒಂದೇ ಮಾತರಂ ಟ್ರಸ್ಟ್ ಅಧ್ಯಕ್ಷ ಪ್ರಿತೇಶ್ ಗ್ರಾಮ ಪಂಚಾಯಿತಿ ಸದಸ್ಯ ಜಾನಕಿರಾಮ್ ಹಾಗೂ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.