News Karnataka Kannada
Friday, May 03 2024
ಚಿಕಮಗಳೂರು

ಅದಾನಿ ಸಂಸ್ಥೆಯಿಂದ ವಂಚನೆ : ಕಾಂಗ್ರೆಸ್ ಪ್ರತಿಭಟನೆ

Congress protests against adani fraud
Photo Credit : News Kannada

ಚಿಕ್ಕಮಗಳೂರು : ಅದಾನಿ ಸಮೂಹ ಸಂಸ್ಥೆಗಳಿಂದ ಆಗಿರುವ ಭಾರಿ ವಂಚನೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಒತ್ತಾ ಯಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯ ಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ಸ್ಟೇಟ್ ಬ್ಯಾಂಕ್ ಮುಂಭಾಗ ಕೆಲ ಕಾಲ ಪ್ರತಿಭಟನೆ ನಡೆಸಿದ ಪಕ್ಷದ ಮುಖಂಡರು ಮತ್ತು ಕಾರ್ಯ ಕರ್ತರು ನಂತರ ಮುಂಭಾಗದ ಗಾಂಧಿ ಪಾರ್ಕಿನಲ್ಲಿ ಸಭೆ ನಡೆಸಿದರು.

ಈ ವೇಳೆ ಮಾತನಾಡಿದ ಬಹುತೇಕ ಮುಖಂಡರು ಅದಾನಿ ಸಂಸ್ಥೆಯಿಂದ ಕೋಟ್ಯಾಂತರ ರೂಪಾ ಯಿ ವಂಚನೆ ನಡೆದಿದ್ದರೂ ಪ್ರಧಾನಿ ಮೋದಿ ಅವರು ಮೌನಕ್ಕೆ ಶರಣಾ ಗಿರುವ ಕುರಿತು ತೀವ್ರ ಅಸಮಾಧಾನ ಮತ್ತು ಅನುಮಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷ ಕಟ್ಟಿ ಬೆಳೆಸಿದ ಸಾರ್ವಜನಿಕ ಉದ್ದಿಮೆಗಳನ್ನು ಬಿಜೆಪಿ ನೇತೃತ್ವದ ಸರ್ಕಾರ ಹಂತ ಹಂತವಾಗಿ ನಾಶ ಮಾಡುತ್ತಿದೆ, ಈ ಮಧ್ಯೆ ಎಸ್ ಬಿ ಐ ಮತ್ತು ಎಲ್‌ಐಸಿ ಗಳಲ್ಲಿ ಜನಸಾಮಾನ್ಯರು ತೊಡಗಿಸಿದ್ದ ಹಣವನ್ನು ಅದಾನಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿ ವಂಚಿಸಲಾಗಿದೆ ಎಂದು ಆರೋಪಿಸಿದರು.

ಭಾರತೀಯ ಜನತಾ ಪಕ್ಷಕ್ಕೂ ಅದಾನಿಗೂ ನೇರ ಸಂಪರ್ಕ ಇದ್ದು ಹಗರಣದ ಬಗ್ಗೆ ನಿರಂತರವಾಗಿ ವರದಿಗಳು ಬರುತ್ತಲೇ ಇವೆ. ಪ್ರತಿಪಕ್ಷ ಗಳು ತನಿಖೆಗೆ ಒತ್ತಾಯಿಸುತ್ತಾ ಬಂದಿದ್ದರೂ ಪ್ರಧಾನಿ ಅವರು ಆ ಬಗ್ಗೆ ಮಾತನಾಡದೆ ಇರುವುದು ಅನು ಮಾನಕ್ಕೆ ಆಸ್ಪದ ನೀಡಿದೆ ಎಂದು ಹೇಳಿದರು. ಅದಾನಿ ಮತ್ತು ಅಂಬಾನಿಗೆ ದೇಶವನ್ನು ಒತ್ತೆ ಇಡಲಾಗಿದ್ದು ಇವರಿ ಬ್ಬರು ಅರ್ಥ ವ್ಯವಸ್ಥೆಯನ್ನು ಬುಡ ಮೇಲು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಎಲ್ಲಾ ವಿಷಯಗಳಿಗೂ ಪ್ರತಿಕ್ರಿ ಯಿಸುವ ಶಾಸಕ ಸಿ.ಟಿ.ರವಿ ಅವರೂ ಕೂಡಾ ಅದಾನಿ ಹಗರಣದ ಬಗ್ಗೆ ಮೌನವಾಗಿದ್ದಾರೆ ಎಂದು ಟೀಕಿಸಿದ ಮುಖಂಡರು ರವಿಯವರು ಈ ಕುರಿತು ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ|| ಅಂಶು ಮಂತ್ , ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಂ.ಸಂದೀಪ್, ಗಾಯತ್ರಿ ಶಾಂತೇ ಗೌಡ, ಎಂ.ಎಲ್.ಮೂರ್ತಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು